ಔರಾದ್: ರಾಯಚೂರು ಜಿಲ್ಲೆ ಲಿಂಗಸುಗೂರಿನಲ್ಲಿ ನಡೆದ ವಿದ್ಯಾರ್ಥಿನಿ ಸಾವಿನ ಘಟನೆ ಖಂಡಿಸಿ ಇಲ್ಲಿಯ ಗೋರ ಸೇನಾ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಸೇನಾದ ತಾಲ್ಲೂಕು ಘಟಕದ ಅಧ್ಯಕ್ಷ ದಿನೇಶ ರಾಠೋಡ, ರಾಜಕುಮಾರ, ವಿವೇಕ ಪವಾರ್, ಮೋತಿರಾಮ ರಾಠೋಡ, ಗಣಪತಿ ರಾಠೋಡ, ರಮೇಶ ಚವಾಣ್, ದೇವಿದಾಸ ಜಾಧವ ಹಾಗೂ ಮತ್ತಿತರರು ಇಲ್ಲಿಯ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ ಬೇರೆ ಬೇರೆ ಕಡೆ ಈ ರೀತಿ ಬಾಲಕಿಯರು, ಶಾಲಾ–ಕಾಲೇಜು ವಿದ್ಯಾರ್ಥಿನಿಯರ ಕೊಲೆ ಪ್ರಕರಣಗಳು ನಡೆಯುತ್ತಿವೆ. ಸರ್ಕಾರ ಈ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.