ಬೀದರ್: ಮಾನವ ಮಹಾದೇವನ ಸ್ವರೂಪನಾಗಲು, ನರಹರನಾಗಲು, ಜೀವ ಶಿವನಾಗಲು ಮೊದಲು ವಿಷಯಗಳನ್ನು ತ್ಯಾಗ ಮಾಡಬೇಕು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಷಡ್ವಿಕಾರಗಳನ್ನು ತ್ಯಾಗ ಮಾಡಬೇಕು. ಪಂಚೇಂದ್ರೀಯಗಳಲ್ಲಿ ಇರುವ ದೌರ್ಬಲ್ಯಗಳನ್ನು ಹೊರಹಾಕಬೇಕು. ಎರಡು ವಸ್ತುಗಳು ಒಂದೇ ಕಾಲಕ್ಕೆ ಒಂದೇ ಸ್ಥಳದಲ್ಲಿ ಒಳ ಸೇರುವುದಿಲ್ಲ. ಕೊಡದಲ್ಲಿ ಗಾಳಿ ತುಂಬಿರುತ್ತದೆ. ಗಾಳಿ ಹೊರಹೋದಾಗಲೇ ನೀರು ಒಳಸೇರುತ್ತದೆ. ಇದೊಂದು ವೈಜ್ಞಾನಿಕ ಸತ್ಯ ಸಂಗತಿ. ಅದೇ ರೀತಿ ದೈವಿಪ್ರೇಮ ಒಳಗೆ ಪ್ರವೇಶ ಆಗಬೇಕಾದರೆ ಅಂತರಂಗದಲ್ಲಿದ್ದ ವಿಷಯವಾಸನೆ ಹೊರಹಾಕಬೇಕು. ಅದುವೇ ವಿಷಯತ್ಯಾಗ.