‘ರೈತ ಸಂಪರ್ಕ ಕೇಂದ್ರಕ್ಕೆ ಸುತ್ತಲಿನ ಉಡಬನಳ್ಳಿ, ಚಾಂಗಲೇರಾ, ಕರಕನಳ್ಳಿ, ಕಾರಪಾಕಪಳ್ಳಿ, ದೇವಗಿರಿ ತಾಂಡಾ, ವಿಠಲಪುರ ಸೇರಿದಂತೆ ಇತರ ಗ್ರಾಮಗಳಿಂದ ರೈತರು ಬರುತ್ತಾರೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಸರತಿಯಲ್ಲಿ ಕಾಯುತ್ತಾರೆ. ಹೀಗಾಗಿ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳಲ್ಲಿ ನೆರಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ರೈತರು ಅಂತರ ಕಾಯ್ದುಕೊಳ್ಳುವಂತೆ ಎಚ್ಚರ ವಹಿಸಬೇಕು. ಒಂದು ದಿನ ಮುಂಚಿತ ರೈತರಿಗೆ ಚೀಟಿಯನ್ನು ವಿತರಿಸಬೇಕು’ ಎಂದು ರೈತ ರಾಮಣ್ಣ ಒತ್ತಾಯಿಸಿದರು.