ಬೀದರ್: ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಹದಿನೈದು ದಿನಗಳ ವರೆಗೆ ನಡೆದ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮ ಈಚೆಗೆ ನಡೆಯಿತು.
ಶಿಬಿರದಲ್ಲಿ ಮಕ್ಕಳಿಗೆ ಶೂಟಿಂಗ್, ಈಜು, ಸ್ಕೇಟಿಂಗ್, ನೃತ್ಯ, ಸಂಗೀತ, ಚಿತ್ರಕಲೆ, ಚಾರಣ ತರಬೇತಿ ನೀಡಲಾಯಿತು. ಭಾಲ್ಕಿ ತಾಲ್ಲೂಕಿನ ಖಾನಾಪುರ ಸಮೀಪದ ಬ್ಲ್ಯಾಕ್ ಬಕ್ ರೆಸಾರ್ಟ್ ಪ್ರದೇಶದಲ್ಲಿ ಚಾರಣ ನಡೆಯಿತು.
ಸಮಾರೋಪ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿದ್ದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ನಿರ್ದೇಶಕ ರೇವಣಸಿದ್ಧಪ್ಪ ಜಲಾದೆ ಮಾತನಾಡಿ, ಗ್ಲೋಬಲ್ ಸೈನಿಕ ಅಕಾಡೆಮಿಯು ರಜಾ ಅವಧಿಯಲ್ಲಿ ಶಿಬಿರ ಆಯೋಜಿಸಿ ಮಕ್ಕಳಿಗೆ ಹೊಸ ಅನುಭವ ಮಾಡಿಸಿದೆ ಎಂದರು.
ಗ್ಲೋಬಲ್ ಸೈನಿಕ ಅಕಾಡೆಮಿಯ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೇನಪುರ ಮಾತನಾಡಿ, ಮಕ್ಕಳ ಪ್ರತಿಭೆ ಗುರುತಿಸುವುದು ಹಾಗೂ ಅವರಲ್ಲಿನ ಆತ್ಮವಿಶ್ವಾಸ ಹೆಚ್ಚಿಸುವುದು ಶಿಬಿರದ ಉದ್ದೇಶವಾಗಿದೆ ಎಂದರು.
ವಾಣಿಜ್ಯ ತೆರಿಗೆ ಅಧಿಕಾರಿ ಬೋಲಜಿ ಪಾಟೀಲ ಮಾತನಾಡಿದರು. ಗೌರವ ಅತಿಥಿಗಳಾಗಿ ಪ್ರಾಚಾರ್ಯ ಮಿಥಿಲೇಶ್ ಕುಮಾರ, ಬಂಡೆಪ್ಪ ಗಡ್ಡೆ, ಇವ್ಲಿನ್ ಜಾರ್ಜ್, ಕಾರಂಜಿ ಸ್ವಾಮಿ, ರಾಮ್ ದವಲಜೆ, ಮಡೆಪ್ಪ, ಅಶೋಕ ಪಾಟೀಲ, ಡಾ.ಆರತಿ ರಘು ಮತ್ತು ಡಾ.ಶರಣ ಬುಳ್ಳ, ಡಾ. ಶಿಲ್ಪಾ ಬುಳ್ಳ ಇದ್ದರು.