ಗುಬ್ಬಿ: ತಾಲ್ಲೂಕಿನ ನಿಟ್ಟೂರು ಕೆರೆಗೆ ಹೊಂದಿಕೊಂಡ ಕೊಡಿಬಸವೇಶ್ವರ ದೇವಸ್ಥಾನದ ಸಮೀಪ ಶುಕ್ರವಾರ ರಾತ್ರಿ ಒಂದು ಟಿನ್ ಶೆಡ್ ಮನೆ ಹಾಗೂ ಎರಡು ಗುಡಿಸಲುಗಳು ಆಕಸ್ಮಿಕ ಬೆಂಕಿಗೆ ಭಸ್ಮವಾಗಿವೆ.
ನಾಗಮ್ಮ, ಜ್ಯೋತಿ ಮತ್ತು ಜಯಮ್ಮ ಎಂಬುವರ ಕುಟುಂಬದವರು ವಾಸಿಸುತ್ತಿದ್ದರು.
ಚಾಪೆ ಹೆಣೆದು ಮಾರಾಟ ಮಾಡುವುದು, ಕೃಷಿ ಉಪಕರಣ ತಯಾರಿಸಿ ಸಂತೆಗಳಲ್ಲಿ ವ್ಯಾಪಾರ ಮಾಡಿ ಈ ಕುಟುಂಬದವರು ಜೀವನ ನಡೆಸುತ್ತಿದ್ದರು.