ಬೀದರ್: ಸ್ವಾಮಿ ವಿವೇಕಾನಂದರು ಯುವ ಜನಾಂಗಕ್ಕೆ ಸ್ಫೂರ್ತಿ ಆಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ರವೀಂದ್ರ ಪಾಟೀಲ ಹೇಳಿದರು.
ಸೂರ್ಯ ಫೌಂಡೇಷನ್ ವತಿಯಿಂದ ಔರಾದ್ ತಾಲ್ಲೂಕಿನ ಲಾಧಾ ಗ್ರಾಮದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಭಗವದ್ಗೀತೆ, ವೇದ, ಉಪ ನಿಷತ್ತುಗಳನ್ನು ಬಾಲ್ಯದಲ್ಲೇ ಅರಿತಿದ್ದರು. ಬೈಬಲ್, ಕುರಾನ್ ಸೇರಿ ಅನ್ಯ ಧರ್ಮ ಗ್ರಂಥಗಳ ಸಾರವನ್ನೂ ತಿಳಿದುಕೊಂಡಿದ್ದರು ಎಂದು ಹೇಳಿದರು.
ಹಿಂದೂ ಧರ್ಮಕ್ಕೆ ಭದ್ರ ಬುನಾದಿ ಹಾಕಿದ್ದರು. ಭಾರತದ ಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸಿದ್ದರು ಎಂದು ತಿಳಿಸಿದರು.
ಸೂರ್ಯ ಫೌಂಡೇಷನ್ ಪ್ರಮುಖ ಭೀಮರಾವ್ ಪಾಟೀಲ ಮಾತನಾಡಿದರು. ಮಾಧುರಾವ್ ದೇಗಲೆ, ಸೋಮನಾಥ ಸ್ವಾಮಿ, ಸಂಜಯ್ ಪಾಟೀಲ, ಮಲ್ಲಿಕಾರ್ಜುನ ಪಾಟೀಲ ಇದ್ದರು.