* * *
ದಲಿತ ಸಂಘರ್ಷ ಸಮಿತಿಗೆ ಆಯ್ಕೆ
ಬೀದರ್: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯ ಬೀದರ್ ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿಯ ಜಿಲ್ಲಾ ಘಟಕದ ಪ್ರಧಾನ ಸಂಚಾಲಕ ರಾಜಕುಮಾರ ಬನ್ನೇರ್ ತಿಳಿಸಿದ್ದಾರೆ.
ಬೀದರ್ ಕ್ಷೇತ್ರ: ನಾಗೇಂದ್ರ ಸಾಗರ (ಸಂಚಾಲಕ), ಅನಿಲ್ ಶಂಪೆ, ಸನ್ಮುಖ ಕಾಂಬಳೆ (ಸಂಘಟನಾ ಸಂಚಾಲಕರು), ಕಲ್ಲಪ್ಪ ವರ್ಮಾ (ಖಜಾಂಚಿ).
ಬೀದರ್ ದಕ್ಷಿಣ: ರಮೇಶ ಸಾಗರ (ಸಂಚಾಲಕ), ಗೌತಮ ಶಂಶೇರನಗರ, ರಮೇಶ ಸಾತೋಳೆ, ಲಕ್ಷ್ಮಣ ಶೇರಿಕಾರ, ಪ್ರವೀಣ ಕಮಠಾಣ, ರಾಜಕುಮಾರ ಕಾಂಬಳೆ, ಶಿವಕುಮಾರ ಸಂಗೋಳಗಿ (ಸಂಘಟನಾ ಸಂಚಾಲಕರು) ಮತ್ತು ರಾಜಕುಮಾರ ಗೈಬಾ (ಖಜಾಂಚಿ).