ಮುಡಬಿ ಗ್ರಾಮ ಪಂಚಾಯಿತಿಯ ಬಗದೂರಿ ಗ್ರಾಮದ ರೈತರ ಹೊಲದಲ್ಲಿ ನರೇಗಾದಲ್ಲಿ ಕಾಮಗಾರಿ ಕೈಗೊಂಡು ₹ 62,748 ಕೂಲಿ ಪಾವತಿಸಲಾಗಿದೆ. ಆದರೆ, ಸೂರ್ಯಕಾಂತ ಪಾಟೀಲ ಬಿಲ್ ಪಾವತಿಸಿಲ್ಲ. ಸರ್ಕಾರದ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ವಿಫಲರಾದ ಆರೋಪ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನೀಡಿದ ವರದಿ ಆದರಿಸಿ ಸೂರ್ಯಕಾಂತ ಪಾಟೀಲ ಅವರ ಹೊರಗುತ್ತಿಗೆ ಸೇವೆಯನ್ನು ರದ್ದುಗೊಳಿಸಿ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ತಿಳಿಸಿದ್ದಾರೆ.