‘ತೆಲಂಗಾಣ, ಮಹಾರಾಷ್ಟ್ರ ಹಾಗೂ ಜಿಲ್ಲೆಯ ಅನ್ಯ ತಾಲ್ಲೂಕುಗಳಿಗೆ ಸಂಪರ್ಕಿಸುವ ಈ ರಸ್ತೆ ಮೇಲಿನ ಸೇತುವೆ ಶಿಥಿಲವಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಬದಲಿ ರಸ್ತೆ ಸರಿಯಿಲ್ಲ. ಸ್ವಲ್ಪ ಮಳೆಯಾದರೂ ಮೇಲಿಂದ ನೀರು ಹರಿಯುತ್ತದೆ. ಹೀಗಾಗಿ ಈ ಭಾಗದ ಹತ್ತಾರು ಹಳ್ಳಿ ಜನ ನಗರ ಪ್ರದೇಶಗಳಿಗೆ ಹೋಗಲು ತುಂಬಾ ತೊಂದರೆಯಾಗುತ್ತಿದೆ’ ಎಂದು ನಾಗೂರ ರೈತ ಸಂತೋಷ ಮಸ್ಕಲೆ ತಿಳಿಸಿದ್ದಾರೆ.