ದೇವನು ಹೆಣ್ಣು, ಹೊನ್ನು ಎಂಬ ಸಂಸಾರ ಬಂಧನ ಎಂಬ ಆಟದ ಸಾಮಾನು ತಿಂಡಿ ಎಸೆಯುತ್ತಾನೆ. ಅದರಲ್ಲಿ ಮಗ್ನರಾಗಿ ಶಿವನನ್ನು ಮರೆಯುತ್ತಾರೆ. ಇವರು ಪೂರ್ಣ ಲೌಕಿಕರು. ಇನ್ನೂ ಕೆಲವು ಹೆಣ್ಣು, ಹೊನ್ನು, ಮಣ್ಣು ಸಂಸಾರದಲ್ಲಿದ್ದುರೂ ಶಿವನು ಬೇಕು ಎಂದು ಹಂಬಲಿಸುತ್ತಾರೆ. ಇವರು ಸದ್ಭಕ್ತರು. ಇನ್ನೂ ಕೆಲವರು ಸಂಸಾರ ಬೇಡ ಹೆಣ್ಣು, ಹೊನ್ನು ಬೇಡ ಕೇವಲ ದೇವನ ಹಂಬಲದಲ್ಲಿರುತ್ತಾರೆ. ಅವರೆ ಮಹಾತ್ಮರು ಸಂತರು ತ್ಯಾಗಿಗಳು. ನಾವು ಕೊನೆಗೆ ಮೊದಲನೆಯವರು ಆಗದೆ ಎರಡನೇ ಮೂರನೆವರಾಗಿ ದೇವನ ಹಂಬಲ ತುಂಬಿಕೊಂಡು ನಮ್ಮ ಗುರಿಮುಟ್ಟಬೇಕು.