ಶನಿವಾರ ನಸುಕಿನ ಜಾವ ಆರೋಪಿಗಳಾದ ಉದಗೀರ್ನ ಕಿರಣ ವೈಜಿನಾಥ, ಕಿಶೋರ ಸಕಾರಾಮ ಕಾಂಬಳೆ ಮತ್ತು ಭಾಲ್ಕಿಯ ಅಶೋಕ ಕಾಶಿನಾಥ ಮುದಾಳೆ, ಕಿರಣ ಸುಮಂತ ಗಾಯಕವಾಡ ಟಾಟಾ ಎಸಿ ವಾಹನದಲ್ಲಿ 03 ಆಕಳುಗಳನ್ನು ಕಳುವು ಮಾಡಿ ಸಾಗಾಟ ಮಾಡುತ್ತಿರುವುದರ ಖಚಿತ ಮಾಹಿತಿ ಮೇರೆಗೆ ಅಂಬೇಡ್ಕರ್ ಸರ್ಕಲ್ ಹತ್ತಿರ ಕಳ್ಳರನ್ನು ಬಂಧಿಸಿ, ಅವರಿಂದ ನಗದು ₹25 ಸಾವಿರ ವಶಪಡಿಸಿಕೊಂಡಿದ್ದಾರೆ. ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಪಿಎಸ್ಐ ಎಸ್.ಎಲ್.ಪಾಟೀಲ್, ಎಎಸ್ಐ ಮಾಣಿಕಪ್ಪ, ಎಚ್.ಸಿ.ಉಮಾಕಾಂತ ದಾನಾ, ಪೇದೆಗಳಾದ ರಮೇಶಕುಮಾರ ಮೇತ್ರೆ, ನಾಗಪ್ಪ ಖೇಡ, ಉತ್ತಮ, ಸಚಿನ್ ಇದ್ದರು.