ಜನವಾಡ: ಬೀದರ್ ತಾಲ್ಲೂಕಿನ ಮರಖಲ್ ಗ್ರಾಮದಲ್ಲಿ 500 ಮೀಟರ್ ತಿರಂಗಾ ಯಾತ್ರೆ ನಡೆಯಿತು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಿಂದ ಆರಂಭವಾದ ಮೆರವಣಿಗೆ ಬೊಮ್ಮಗೋಡೇಶ್ವರ, ಅಂಬೇಡ್ಕರ್ ಭವನ ಮಾರ್ಗವಾಗಿ ಭಗತ್ ಸಿಂಗ್ ಚೌಕ್ ವರೆಗೆ ಬಂದು ಮುಕ್ತಾಯ ವಾಯಿತು.
ಇದಕ್ಕೂ ಮೊದಲು ಸೂರ್ಯಕಾಂತ ನಾಗಮಾರಪಲ್ಲಿ ಚಾಲನೆ ನೀಡಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ನೈಟಿಂಗಲ್ ಪಬ್ಲಿಕ್ ಸ್ಕೂಲ್ ಅಮೂಲ್ಯ ಸ್ಕೂಲ್, ಲೋಕೇಶ್ ಬಿರಾದರ, ಕಾಮಶೆಟ್ಟಿ ಬಯ್ಯ, ಸತೀಶ್ ಪಾರಾ, ಸತೀಶ್ ಬಿರಾದಾರ್, ವಿನಾಯಕ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.