ಕನ್ನಡದಲ್ಲಿ ಹರ ತಿರಿಯುವನು, ಕನ್ನಡದಲ್ಲಿ ಹರಿ ಬರೆಯುವನು ಎಂಬ ಕುವೆಂಪು ವಾಣಿಯ ಇಂಗಿತವೇನು? ಮಾತೃಭಾಷೆ ಹೃದಯದ ಭಾಷೆ; ಮನ ಭಾಷೆ, ಪ್ರೀತಿಯ ಭಾಷೆ, ಬಾಳಿನ ಭಾಷೆ. ತಾಯ್ನುಡಿ, ತಾಯಿ ಎಂದೂ ಪರದೇಶಿಯಾಗಬಾರದು. ಪರ ಸಂಸ್ಕೃತಿ ಎಷ್ಟಿದ್ದರೂ ಅದು ಹೊರೆ. ಇಲ್ಲದ ಹೊರೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿ ಹೆಸರಿನಲ್ಲಿ ಮಗುವಿನ ಮೇಲೆ ಹೇರಬಾರದು ಎಂದು ಹೇಳಿದ್ದಾರೆ.