ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಪೊಲೀಸ್ ಆಯುಕ್ತ ದತ್ತ ಪಡಸಗಿಕರ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿರುವ ಕಾನ್ಸ್ಟೆಬಲ್ ಧ್ಯಾನೇಶ್ವರ್ ಅಹಿರಾವ್, ‘ಕಾಯಿಲೆಗೆ ತುತ್ತಾಗಿರುವ ಪತ್ನಿಯ ವೈದ್ಯಕೀಯ ಹಾಗೂ ಕುಟುಂಬದ ಇತರ ವೆಚ್ಚಕ್ಕಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ಬಂದೊದಗಿದೆ’ ಎಂದು ವಿವರಿಸಿದ್ದಾರೆ. ಧ್ಯಾನೇಶ್ವರ್ ಅವರನ್ನು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ನಿವಾಸ ಮಾತೋಶ್ರೀಯ ಭದ್ರತಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ.