ರಾಮದಾಸ್ ಮೋಹನ್ ಚಾಪೆ ಅವರು ರಾಷ್ಟ್ರಿಯ ಹೆದ್ದಾರಿ ಪಕ್ಕದ ದಾದ್ರಾ ಬಳಿ ವೆಲ್ಡಿಂಗ್ ಅಂಗಡಿ ಇಟ್ಟುಕೊಂಡಿದ್ದರು. ಬಾಲೂರಿಗೆ ತೆರಳಿ ವಾಪಸ್ ಅಂಗಡಿಗೆ ಬರುತ್ತಿದ್ದಾಗ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಮೃತನ ಪತ್ನಿ ಸವಿತಾ ರಾಮದಾಸ ನೀಡಿದ ದೂರಿನ ಮೇರೆಗೆ ಕಮಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸ್ಥಳಕ್ಕೆ ಭಾಲ್ಕಿ ಡಿವೈಎಸ್ಪಿ ಪ್ರತ್ವಿಕ್ ಶಂಕರ್, ಸಿಪಿಐ ರಾಮಪ್ಪ ಸಾವಳಗಿ, ಪಿಎಸ್ಐ ಚಂದ್ರಶೇಖರ, ಭೇಟಿ ನೀಡಿ ಪರಿಶೀಲಿಸಿದರು.