ಬಸವಕಲ್ಯಾಣ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ವಾಗತಕ್ಕೆ ಉಜಳಂಬ ಗ್ರಾಮವು ಸಜ್ಜುಗೊಂಡಿದೆ. ಮುಖ್ಯಮಂತ್ರಿ ಜನತಾ ದರ್ಶನ ನಡೆಸಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದ ಸುತ್ತ ಪೊಲೀಸ್ ಸರ್ಪಗಾವಲು ಇದೆ.
ತಪಾಸಣೆ ನಂತರವೇ ಜನರನ್ನು ಒಳಗೆಬಿಡಲಾಗುತ್ತಿದೆ. ಜನತಾ ದರ್ಶನದಲ್ಲಿ ಪಾಲ್ಗೊಳ್ಳುವವರು ಹೆಸರು ನೋಂದಣಿ ಆರಂಭಿಸಿದ್ದಾರೆ.
ಮುಖ್ಯಮಂತ್ರಿಯನ್ನು ಕರೆತರಲು ಎತ್ತಿನಬಂಡಿ ಸಿದ್ಧಗೊಳ್ಳುತ್ತಿದೆ. ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಪೋಲಿಸರು ಎಲ್ಲೆಡೆ ಕಾಣುತ್ತಿದ್ದಾರೆ.ಜನರು ಗುಂಪುಗುಂಪಾಗಿ ಬರುತ್ತಿದ್ದಾರೆ.
ಸಾರ್ವಜನಿಕರ ವಾಹನಗಳನ್ನು ಊರ ಹೊರ ಭಾಗದಲ್ಲಿ ಒಂದು ಕಿ.ಮಿ. ದೂರದಲ್ಲಿ ಪಾರ್ಕಿಂಗ್ ಮಾಡಲಾಗುತ್ತಿದೆ. ಅಲ್ಲಿಂದ ಸಭಾ ಮಂಟಪದವರೆಗೆ ನಡೆದುಕೊಂಡು ಬರಬೇಕಾಗುತ್ತಿದೆ.