ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾ.5, 6ಕ್ಕೆ ಉರಿಲಿಂಗಪೆದ್ದಿ ಉತ್ಸವ

ಪ್ರಥಮ ವಿಮರ್ಶಾ ಸಮ್ಮೇಳನ, ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ಆಯೋಜನೆ
Last Updated 19 ಫೆಬ್ರುವರಿ 2021, 3:45 IST
ಅಕ್ಷರ ಗಾತ್ರ

ಬೇಲೂರ (ಹುಲಸೂರ): ‘ತಾಲ್ಲೂಕಿನ ಬೇಲೂರಿನ ಉರಿಲಿಂಗಪೆದ್ದಿ ಮಠದಲ್ಲಿ ಮಾರ್ಚ್ 5 ಹಾಗೂ 6 ರಂದು ಉರಿಲಿಂಗಪೆದ್ದಿ ಉತ್ಸವ, ಲಿಂ.ಶಿವಲಿಂಗೇಶ್ವರ ಶಿವಯೋಗಿಗಳ 52ನೇ ಸ್ಮರಣೋತ್ಸವ ಹಾಗೂ ಪ್ರಥಮ ವಿಮರ್ಶಾ ಸಮ್ಮೇಳನ, ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ಆಯೋಜಿಸಲಾಗಿದೆ’ ಎಂದು ಪೀಠಾಧಿಪತಿ ಪಂಚಾಕ್ಷರಿ ಸ್ವಾಮೀಜಿ ತಿಳಿಸಿದರು.

ಬೇಲೂರಿನಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಉತ್ಸವದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ. ಹೋಳಿಗೆ ತುಪ್ಪದ ದಾಸೋಹ ವ್ಯವಸ್ಥೆ ಕಲ್ಪಿಸಲಾಗುತ್ತದೆ’ ಎಂದೂ ಹೇಳಿದರು.

ನಾಡಿನ ಸಾಹಿತಿ, ಕಲಾವಿದರನ್ನು, ರಾಜಕೀಯ ಮುಖಂಡರನ್ನು ಆಹ್ವಾನಿ ಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ಕಾರ್ಯಾಧ್ಯಕ್ಷರನ್ನಾಗಿ ಜಗನ್ನಾಥ ಚಿಲ್ಲಾಬಟ್ಟೆ, ಸಂಯೋಜಕರನ್ನಾಗಿ ಡಾ.ಗವಿಸಿದ್ದಪ್ಪ ಪಾಟೀಲ, ಕೋಶಾಧ್ಯಕ್ಷರನ್ನಾಗಿ ಪ್ರದೀಪ ವಾತಡೆ ಅವರನ್ನು ನೇಮಿಸಲಾಯಿತು.

ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಚಿಂಚೋಳಿ ಸಿ.ಬಿ.ಪಾಟೀಲ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರು, ಸಾಹಿತಿ ಡಾ.ಶ್ರೀಶೈಲ್ ನಾಗರಾಳ ಅವರನ್ನು ಆಯ್ಕೆ ಮಾಡಲಾಯಿತು.

ಗ್ರಾಮ ಪಂಚಾಯಿತಿ ನೂತನ ಸದಸ್ಯರನ್ನು ಸನ್ಮಾನಿಸಲಾಯಿತು.

ಡಾ.ಗವಿಸಿದ್ದಪ್ಪ ಪಾಟೀಲ, ಜಗನ್ನಾಥ ಚಿಲ್ಲಾಬಟ್ಟೆ, ಸುರೇಶ ಕಾನೆಕರ್, ಸುರೇಶ ಮೋರೆ, ಅಶೋಕ ವಕಾರೆ, ರಾಜಕುಮಾರ ನಂದೋಡೆ, ರಾಮಣ್ಣ ಸಾಯಗಾವೆ, ಸಂಜೀವ ಖೇಲೆ, ಸುಭಾಷ ಮಚಕೂರಿ ಮಾತನಾಡಿ ಕಾರ್ಯಕ್ರಮದ ರೂಪು ರೇಷೆಗಳ ಬಗ್ಗೆ ಸಲಹೆ ನೀಡಿದರು.

ಭೀಮಶಾ ವಾಘ್ಮಾರೆ, ವಿನೋದ ಸಿಂಧೆ, ಸುಶೀಲ ಮಚಕೂರಿ, ರಾಕೇಶ ರಾಜಗುರು, ಪ್ರಶಾಂತ ವಾಘ್ಮಾರೆ, ಜಯದ್ರತ್ ಮೈಸಲಗೆ, ಸದಾನಂದ ಭೋಸ್ಲೆ, ಸಂದೀಪ ಮಚಕೂರಿ, ರಮೇಶ ಗೋಡಬೋಲೆ, ಅವಿನಾಶ ಬೆಳ್ಳೆ, ಸಂಗಮನಾಥ ಹೆಬ್ಬಾಳೆ, ಪ್ರಭು ಕರಾಳೆ, ಕೀರ್ತಿಪಾಲ ದಾಂಡಗೆ, ಶ್ರೀನಿವಾಸ ಬಿರಾದಾರ ಉಪಸ್ಥಿತರಿದ್ದರು. ನವನಾಥ ಬೆಳ್ಳೆ ನಿರೂಪಿಸಿದರು. ಗೌತಮ ವಾಘ್ಮಾರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT