ವಿಷ್ಣು ಸಹಸ್ರನಾಮ ಪಾರಾಯಣ, ಮಹಾಪೂಜೆ, ಪ್ರವಚನ, ಭಜನೆ ಮೊದಲಾದ ಕಾರ್ಯಕ್ರಮಗಳು ಜರುಗಿದವು. ವಿವಿಧೆಡೆಯಿಂದ ಬಂದಿದ್ದ ಭಕ್ತರು ದೇವರ ದರ್ಶನ ಪಡೆದು ಕೃತಾರ್ಥರಾದರು.
ಉಪವಾಸ ವ್ರತ ಆಚರಿಸುವ ಭಕ್ತರಿಗೆ ಬಾಳೆ ಹಣ್ಣು, ಉಪಾಹಾರ ಹಾಗೂ ಹಾಲು ವಿತರಿಸಲಾಯಿತು. ರಾತ್ರಿ ಮಹಾ ಮಂಗಳಾರತಿ ಜರುಗಿತು.
ಏಕಾದಶಿ ಪ್ರಯುಕ್ತ ಬೆಂಗಳೂರು, ಹೈದರಾಬಾದ್, ಚಿತ್ರದುರ್ಗದಿಂದ ತಂದಿದ್ದ ಹೂವುಗಳಿಂದ ದೇವಸ್ಥಾನವನ್ನು ಅಲಂಕರಿಸಲಾಗಿತ್ತು. ದೇವರ ವಿಗ್ರಹಕ್ಕೆ ವಿಶೇಷ ಶೃಂಗಾರ ಮಾಡಲಾಗಿತ್ತು.
ಬಾಳು ಹಸನು: ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಗಿರಿಧರ ಪೂಜಾರಿ ಅವರು, ವೈಕುಂಠ ಏಕಾದಶಿ ಪವಿತ್ರವಾದದ್ದು. ಈ ದಿನ ದೇವರ ದರ್ಶನ ಪಡೆದವರ ಬಾಳು ಹಸನಾಗುತ್ತದೆ ಎಂದು ತಿಳಿಸಿದರು.
ವೆಂಕಟೇಶ ಯರಮಲ್ಲಿ ಮಾತನಾಡಿ, ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸ ಇದೆ ಎಂದು ಹೇಳಿದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ಮಾತನಾಡಿ, ಭಕ್ತರು ಸುರಕ್ಷತಾ ನಿಯಮ ಪಾಲಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ ಎಂದು ಹೇಳಿದರು.
ವೆಂಕಟೇಶ ಪಿ. ಗಾದಾ ಮಾತನಾಡಿದರು. ಅನಂತಶಯನ ಮಂದಿರದ ಅಧ್ಯಕ್ಷ ಸಂಗಯ್ಯ ರೇಜಂತಲ್, ಕಾರ್ಯದರ್ಶಿ ದಿಗಂಬರ ಪೋಲಾ, ಚಿಟ್ಟಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ ಬಿರಾದಾರ್ ಇದ್ದರು.