ರಾಜಶೇಖರ ಪಾಟೀಲ ಅವರು ಗುರುವಾರ ರಾತ್ರಿ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ‘ಕೋವಿಡ್-19 ಆತಂಕದಿಂದಾಗಿ ಕೇವಲ ಧಾರ್ಮಿಕ ವಿಧಿಗಳನ್ನು ಸೇವಾಧರಿಗಳಿಂದ ಮಾತ್ರ ನಡೆಸಿ ಜಾತ್ರೆ ಮುಗಿಸಬೇಕಾಗಿದೆ. ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಮನೆಯಲ್ಲಿಯೇ ಭಕ್ತಿ ಸೇವೆ ಸಲ್ಲಿಸಬೇಕು’ ಎಂದು ನುಡಿದರು.