‘ಛಲ ಬೇಕು ಶರಣಂಗೆ ಪರಧನವನೊಲ್ಲೆನೆಂಬ, ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ, ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ, ಛಲ ಬೇಕು ಶರಣಂಗೆ ಲಿಂಗ ಜಂಗಮ ಒಂದೆಂಬ, ಛಲ ಬೇಕು ಶರಣಂಗೆ ಪ್ರಸಾದ ದಿಟವೆಂಬ, ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ’ ಎಂಬ ವಚನ ವಾಣಿಯಂತೆ ತಾನು ದುಡಿಯದೆ ಬಂದ ಪರಧನವನ್ನು ಮುಟ್ಟಲಾರೆ, ಪರಸ್ತ್ರೀಯನ್ನು ಹೆತ್ತ ತಾಯಿ ಸಮಾನವೆಂದು ಭಾವಿಸುವೆ, ಸಕಲ ಜೀವಾತ್ಮರಿಗೆ ಲೇಸನ್ನೇಬಯಸುವೆ, ನೋವು-ನಲಿವುಗಳನ್ನು ಪ್ರಸಾದವಾಗಿ ಸ್ವೀಕರಿಸುವೆ ಎನ್ನುವ ಛಲವನ್ನು ಧರಿಸಬೇಕು. ಎಂಥದ್ದೇ ಸ್ಥಿತಿಯಲ್ಲಿ ಸಮಚಿತ್ತತೆ ಕಾಯ್ದುಕೊಳ್ಳುವ ಮನೋಸ್ಥಿತಿ ಬೆಳೆಸಿಕೊಳ್ಳಬೇಕು.ತನ್ಮೂಲಕ ಸುಂದರ , ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕು.