ಕೆರೆಯಲ್ಲಿನ ಹೊಳೆತ್ತಿ, ಕೆರೆಯನ್ನು ಕಸಕಡ್ಡಿಗಳಿಂದ ಸ್ವಚ್ಛಗೊಳಿಸಬೇಕು ಎಂದು ಸುಮಾರು ವರ್ಷಗಳಿಂದ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ, ಪಂಚಾಯತ್ ರಾಜ್ ಇಲಾಖೆ ಎಇಇ ಸೇರಿದಂತೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸಲಾಗಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಗ್ರಾಮಸ್ಥರು ಬಾವಿಯಲ್ಲಿನ ನೀರು ಮನೆಗಳ ನಳ, ಸಣ್ಣ ನೀರಿನ ಟ್ಯಾಂಕರ್ಗೆ ಬಂದರೂ ಬಳಕೆಗೆ ಮಾತ್ರ ಎಂಬಂತಾಗಿದೆ. ಕುಡಿಯುವ ನೀರಿಗಾಗಿ ಅವರಿವರ ಹೊಲ, ತೋಟಗಳಿಗೆ ತೆರಳಬೇಕಾಗಿದೆ. ಹಣ ಉಳ್ಳವರು ಫಿಲ್ಟರ್ ನೀರು ತಂದು ಕುಡಿಯುತ್ತಾರೆ. ಬಡವರ ಕಷ್ಟ ಹೇಳತೀರದಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಾರೆ.