‘ಏಪ್ರಿಲ್ 28ರಂದು ನನ್ನ ಸಹೋದರ ಓಂಕಾರ್ಗೆ ಜ್ವರ ಕಾಣಿಸಿಕೊಂಡಿತ್ತು. ಸಂತಪುರ, ಔರಾದ್ನ ಆಸ್ಪತ್ರೆಯ ವೈದ್ಯರಿಗೆ ತೋರಿಸಿದರೂ ಕಡಿಮೆಯಾಗಲಿಲ್ಲ. ಹೈದರಾಬಾದ್ಗೆ ಹೋದಾಗ ಇವರಿಗೆ ಕೋವಿಡ್ ಇದೆ ಎಂದು ತಿಳಿಯಿತು. ಅಲ್ಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೂರು ದಿನ ಚಿಕಿತ್ಸೆ ಕೊಡಿಸಿದರೂ ಸುಧಾರಣೆ ಕಂಡು ಬರಲಿಲ್ಲ. ಇತರೆ ಆಸ್ಪತ್ರೆಯವರು ಸೇರಿಸಿಕೊಳ್ಳಲು ತಯಾರಿರಲಿಲ್ಲ. ಹೀಗಾಗಿ ತಿರುಗಿ ಏಪ್ರಿಲ್ 29ರಂದು ಬೀದರ್ ಆಸ್ಪತ್ರೆಗೆ ತಂದು ಸೇರಿಸಿದ್ದೆವು’ ಎಂದು ತಿಳಿಸಿದರು.