ಶಿವಮೊಗ್ಗ: ಜಿಲ್ಲಾ ಬಿಜೆಪಿ ಯುವಮೋರ್ಚಾ ಮಾರ್ಚ್ 4 ಮತ್ತು 5ರಂದು ಎನ್ಇಎಸ್ ಮೈದಾನದಲ್ಲಿ ‘ಮೋದಿ ವಿಜಯ್ ಲಕ್ಷ್ಯ -ಕಮಲ ಕಪ್' ಹೊನಲು ಬೆಳಕಿನ ಟೆನಿಸ್ ಬಾಲ್ ಕ್ರಿಕೆಟ್ ಆಯೋಜಿಸಲಾಗಿದೆ.
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶ ಸಾಕಷ್ಟು ಅಭಿವೃದ್ಧಿಯಾಗಿದೆ. ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವುದು ಯುವ ಮೋರ್ಚಾ ಆಶಯ. ಅದರ ಅಂಗವಾಗಿ ಈ ಹೊನಲು ಬೆಳಕಿನ ಕ್ರಿಕೆಟ್ ಆಯೋಜಿಸಲಾಗಿದೆ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಹೃಷಿಕೇಷ್ ಪೈ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈಗಾಗಲೇ 5 ಕಡೆ ಪಂದ್ಯ ಆಯೋಜಿಸಲಾಗಿದೆ. 4 ಮತ್ತು 5ರಂದು ನಡೆಯುವ ಪಂದ್ಯದಲ್ಲಿ 16 ತಂಡಗಳು ಭಾಗವಹಿಸಲಿವೆ. ಐಪಿಎಲ್ ಮಾದರಿಯಲ್ಲಿ ಕ್ರಿಕೆಟ್ ನಡೆಯಲಿದೆ. 4ರಂದು ಬೆಳಿಗ್ಗೆ 9ಕ್ಕೆ ಉದ್ಘಾಟನೆ ಇರುತ್ತದೆ. 5ರಂದು ಸಂಜೆ 5ಕ್ಕೆ ಸಮಾರೋಪ. ಪ್ರಥಮ ಬಹುಮಾನ ₨ 1 ಲಕ್ಷ, ದ್ವಿತೀಯ ಬಹುಮಾನ ₨ 50 ಸಾವಿರ ಒಳಗೊಂಡಿರುತ್ತದೆ ಎಂದರು.