ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲವಾರ್‌ನಿಂದ ಕೇಕ್‌ ಕತ್ತರಿಸಿದ ಫೋಟೋ ವೈರಲ್‌..!

Last Updated 4 ಜುಲೈ 2018, 12:21 IST
ಅಕ್ಷರ ಗಾತ್ರ

ವಿಜಯಪುರ:ಬಿಜೆಪಿಯ ವಿಜಯಪುರ ನಗರ ಮಂಡಲ ಅಧ್ಯಕ್ಷ ಶಿವರುದ್ರ ಬಾಗಲಕೋಟ (ಜೂನ್‌ 29) ತಮ್ಮ ಜನ್ಮದಿನದಂದು ತಲವಾರ್‌ನಿಂದ ಕೇಕ್‌ ಕತ್ತರಿಸಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಶಿವರುದ್ರ ತಮ್ಮ ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಹಲ ಫೋಟೋಗಳ ಜತೆ ಈ ಫೋಟೋವನ್ನು ಸಹ ಅಪ್‌ಲೋಡ್‌ ಮಾಡಿಕೊಂಡಿದ್ದರು. ಪರಿಚಯಸ್ಥರೇ ಇದನ್ನು ವೈರಲ್‌ ಮಾಡಿದ್ದಾರೆ ಎನ್ನಲಾಗಿದೆ.ತಲವಾರ್‌ನಿಂದ ಕೇಕ್‌ ಕತ್ತರಿಸಿರುವುದಕ್ಕೆ ಸಂಬಂಧಿಸಿದಂತೆ ತೀವ್ರ ಚರ್ಚೆ ನಡೆದಿದ್ದು, ಟೀಕೆ–ಪ್ರತಿ ಟೀಕೆಗಳು ವ್ಯಕ್ತವಾಗಿವೆ.

‘ಜನ್ಮದಿನದಂದು ನಗರದ 20ಕ್ಕೂ ಹೆಚ್ಚು ಕಡೆ ಅಪಾರ ಸಂಖ್ಯೆಯ ಜನರ ಮುಂಭಾಗ ಕೇಕ್‌ ಕತ್ತರಿಸಿದ್ದೆ. ಓಣಿಯೊಂದರಲ್ಲಿ ಅಭಿಮಾನಿಗಳು ನನ್ನ ಕೈಗೆ ತಲವಾರ್‌ ಕೊಟ್ಟು ಕೇಕ್‌ ಕತ್ತರಿಸುವಂತೆ ಒತ್ತಾಯಿಸಿದರು. ಅವರ ಆಗ್ರಹಕ್ಕೆ ಮಣಿದು ಕೇಕ್‌ ಕತ್ತರಿಸಿದ್ದೇ’ ಎಂದು ಶಿವರುದ್ರ ಬಾಗಲಕೋಟ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT