ಪ್ರಸಾದ ವ್ಯವಸ್ಥೆ, ಪಾನಕ ವಿತರಣೆ: ವೀರಭದ್ರಸ್ವಾಮಿಯ ಜಾತ್ರೆಯ ಅಂಗವಾಗಿ ಚನ್ನಗಿರಿಯ ಲಿಂಗದಳ್ಳಿ ವಂಶಸ್ಥರಾದ ಉಮೇಶಣ್ಣ, ಷಡಕ್ಷರಿ ಬಾಬು, ರೇಣುಕಣ್ಣ ಹಾಗೂ ಭದ್ರಣ್ಣ ಅವರು ಸೋಮವಾರ ಹಾಗೂ ಮಂಗಳವಾರ ಜಾತ್ರೆಗೆ ಬಂದ ಎಲ್ಲಾ ಭಕ್ತರಿಗೆ ಸಿಹಿ ಊಟದ ಪ್ರಸಾದ ವ್ಯವಸ್ಥೆ ಮಾಡಿದ್ದರು. ಭಾನುವಾರದಿಂದ ಮಂಗಳವಾರದವರೆಗೆ ಸುಮಾರು ಒಂದು ಲಕ್ಷ ಭಕ್ತರು ದರ್ಶನ ಪಡೆದಿದ್ದಾರೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.