ಯಡಿಯೂರಿನತೋಂಟದ ಸಿದ್ಧಲಿಂಗೇಶ್ವರ ಕೈಂಕರ್ಯ ಸೇವಾ ಸಂಘ (ಯಡಿಯೂರಿನ ದಾಸೋಹ ಸಮಿತಿ), ಸ್ಥಳೀಯ ಸಂಘಗಳು, ದೇವಾಲಯದ ಭಕ್ತರು, ದಾನಿಗಳು ಹಾಗೂ ಗ್ರಾಮಸ್ಥರೆಲ್ಲ ಒಟ್ಟುಗೂಡಿ ದೇವಾಲಯದ ಜೀರ್ಣೋದ್ಧಾರದಲ್ಲಿ ತೊಡಗಿದ್ದು, ಇನ್ನು ಮುಂದೆ ಪ್ರತಿ ವರ್ಷ ಸಂಕ್ರಾತಿ ಕಳೆದು ಏಳನೇ ದಿನಕ್ಕೆ (ಜನವರಿ 21) ರಥೋತ್ಸವ ನಡೆಸಲು ತೀರ್ಮಾನಿಸಿದ್ದಾರೆ.