ಚಾಮರಾಜನಗರ: ಮಲೆಮಹದೇಶ್ವರ ವನ್ಯಧಾಮದ ಕಳ್ಳಬೇಟೆ ತಡೆ ಶಿಬಿರವೊಂದಕ್ಕೆ ಚಿತ್ರ ನಟ ದರ್ಶನ್ ಭಾನುವಾರ ಭೇಟಿ ನೀಡಿದ್ದಾರೆ.
ವನ್ಯಧಾಮದ ಕೊಳ್ಳೇಗಾಲ ವಲಯದ ಬಫರ್ ವಲಯದ ದೊಡ್ಡಮಕ್ಕಳ್ಳಿಯ ಕಳ್ಳಬೇಟೆ ತಡೆ ಶಿಬಿರಕ್ಕೆ ಹಾಸ್ಯ ನಟ ಚಿಕ್ಕಣ್ಣ ಅವರೊಂದಿಗೆ ಭೇಟಿ ನೀಡಿ ವಾಚರ್ ಹಾಗೂ ಇದರ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದರು.
ಹಸಿರು ಕರ್ನಾಟಕ ಯೋಜನೆಯ ರಾಯಭಾರಿಯೂ ಆಗಿರುವ ದರ್ಶನ್ ಅವರು, ಅರಣ್ಯ ಕೃಷಿ ಯೋಜನೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಗಿಡವನ್ನೂ ನೆಟ್ಟರು.