ಏಕೈಕ ಆರೋಗ್ಯ ಉಪಕೇಂದ್ರ: ಈ ಭಾಗದಲ್ಲಿರುವ ಗೋಪಿನಾಥಂ, ಪುದೂರು ಮಾರಿಕೊಟ್ಟಾಯಿ, ಆಲಂಬಾಡಿ ಹಾಗೂ ಇನ್ನಿತರ ಗ್ರಾಮಗಳಿಗೆ ಇರುವುದು ಒಂದೇ ಒಂದು ಆರೋಗ್ಯ ಉಪಕೇಂದ್ರ. ಅದು ಗೋಪಿನಾಥಂನಲ್ಲಿದೆ. ಆದರೆ, ಅಲ್ಲಿ ಶುಶ್ರೂಷಕರು ಇಲ್ಲ. ತುರ್ತು ಸಂದರ್ಭದಲ್ಲಿಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೇ ಹೋಗಬೇಕು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಕೊಳ್ಳೇಗಾಲದ ಉಪವಿಭಾಗದ ಆಸ್ಪತ್ರೆಗೆ ಹೋಗಬೇಕಿದೆ.