ಚಾಮರಾಜನಗರದ ಅವತಾರ್ ನೃತ್ಯ ಅಕಾಡೆಮಿಯ ಪ್ರವೀಣ್ ಮತ್ತು ತಂಡವು ಬಯಲು ರಂಗಮಂದಿರದಲ್ಲಿ ನೃತ್ಯ ಪ್ರದರ್ಶನ ನೀಡಿತು. ದೇವಾಲಯದ ಬಳಿ ಇರುವ ರಂಗಮಂದಿರದಲ್ಲಿ ಕಡಬ ಶ್ರೀನಿವಾಸ್ ಮತ್ತು ತಂಡ ಜಾನಪದ ಜಾದೂ ಹಾಗೂ ರಸಮಂಜರಿ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿತು. ಗುಂಡ್ಲುಪೇಟೆ ಬಾಚನಹಳ್ಳಿಯ ಮಾದೇಶ್ ಮತ್ತು ತಂಡವು ಮಹದೇಶ್ವರರ ಗೀತೆಗಳನ್ನು ಹಾಡಿ ಭಕ್ತರನ್ನು ಪುಳಕಗೊಳಿಸಿತು.