‘ದೊಡ್ಡ ದೊಡ್ಡ ಕಂಪನಿಗಳು, ಬಂಡವಾಳಶಾಹಿಗಳನ್ನು ಗುರಿಯಾಗಿಸಿಕೊಂಡು ಈ ಕಾಯ್ದೆಯನ್ನು ರೂಪಿಸಲಾಗಿದೆ. ಖಾಸಗಿ ವರ್ತಕರು ಮಾರುಕಟ್ಟೆಯ ಪ್ರಾಂಗಣದ ಹೊರಗೆ ಯಾವುದೇ ಟೆಂಡರ್, ಹರಾಜುಗಳಿಲ್ಲದೇ ಅವರ ಇಷ್ಟ ಬಂದ ಹಾಗೆ ರೈತರಿಂದ ಖರೀದಿಸಲು ಅವಕಾಶ ನೀಡಲಾಗಿದೆ. ಇವರ ಮೇಲೆ ದರ ನಿಗದಿ, ತೂಕ ವ್ಯತ್ಯಾಸ ಇನ್ನಿತರ ಯಾವುದೇ ವಿಷಯಗಳಲ್ಲಿ ರೈತರಿಗೆ ಆಗುವ ಅನ್ಯಾಯ, ಮೋಸಗಳ ಮೇಲೆ ಮೇಲ್ವಿಚಾರಣೆ ನಡೆಸುವ ಅಧಿಕಾರ ಎಪಿಎಂಸಿಗಳಿಗೆ ಇಲ್ಲದಂತೆ ಮಾಡಲಾಗಿದೆ’ ಎಂದು ಅವರು ದೂರಿದರು.