ನಂಜನಗೂಡು ಅರಣ್ಯ ಭಾಗ ದಿಂದ ಕರಡಿಯು ಹಿರಿಕಾಟಿಯ ಮಹೇಂದ್ರ ಅವರ ತೋಟಕ್ಕೆ ಗುರುವಾರ ಬಂದಿದೆ. ಮಧ್ಯಾಹ್ನ 12ರ ಸುಮಾರಿಗೆ ಇದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಇಲಾಖೆಯ ಸಿಬ್ಬಂದಿ ಕರಡಿಯನ್ನು ಸೆರೆ ಹಿಡಿಯಲು ಪ್ರಯತ್ನಿಸಿದರು. ಈ ವೇಳೆ ಎದುರಿಗೆ ಬಂದ ನಾಗಯ್ಯ ಅವರಿಗೆ ಮೇಲೆರಗಿ ಪರಚಿದೆ. ನಂತರ, ಜಮೀನಿನಲ್ಲಿರುವ ಪೊದೆಯೊಳಗೆ ಓಡಿಹೋದ ಕರಡಿ, ಸ್ವಲ್ಪ ಸಮಯದ ನಂತರ ನಂಜನಗೂಡು ಅರಣ್ಯ ಪ್ರದೇಶದ ಕಡೆಗೆ ಹೋಗಿದೆ. ಸಂಜೆಯಾಗಿದ್ದರಿಂದ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ನಿಲ್ಲಿಸಿದರು.