ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಪೇಸಿಎಂ ಟೀಶರ್ಟ್ ಧರಿಸಿದ್ದ ಪಾದಯಾತ್ರಿ ವಶಕ್ಕೆ

Last Updated 1 ಅಕ್ಟೋಬರ್ 2022, 10:13 IST
ಅಕ್ಷರ ಗಾತ್ರ

ಚಾಮರಾಜನಗರ: ಕಾಂಗ್ರೆಸ್‌ ನಾಯಕರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೊ ಯಾತ್ರೆಯಲ್ಲಿ ಪೇಸಿಎಂ ಎಂದು ಬರೆದಿರುವ ಟೀಶರ್ಟ್‌ ಧರಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತ ಅಕ್ಷಯ್‌ ಕುಮಾರ್‌ ಸಿಂದಗಿ ಎಂಬುವವರನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.

ಶನಿವಾರ ಬೆಳಿಗ್ಗೆ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರಿನಿಂದ ಮೈಸೂರು ಜಿಲ್ಲೆಯತ್ತ ಹೊರಟಿದ್ದ ಪಾದಯಾತ್ರೆಯಲ್ಲಿ ಅಕ್ಷಯ್‌ ಕುಮಾರ್‌ ಹೆಜ್ಜೆ ಹಾಕುತ್ತಿದ್ದರು.

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿಯವರಾದ ಅಕ್ಷಯ್‌ ಕುಮಾರ್‌ ಅವರುಶುಕ್ರವಾರ ಗುಂಡ್ಲುಪೇಟೆಯಲ್ಲಿ ಸಾಗಿದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.ಅವರು ಧರಿಸಿದ್ದ ಟೀಶರ್ಟ್‌ ಹಾಗೂ ಧ್ವಜ ಜನರ ಗಮನ ಸೆಳೆದಿತ್ತು.

ಅಕ್ಷಯ್ ವಿರುದ್ಧ ಗುಂಡ್ಲುಪೇಟೆಯ ಜಿ.ಎಸ್‌.ಕಿರಣ್‌ ಎಂಬುವವರು ಶುಕ್ರವಾರ ಚಾಮರಾಜನಗರ ಸಿಇಎನ್‌ ಅಪರಾಧ ಠಾಣೆಗೆ ದೂರು ನೀಡಿದ್ದರು.

ಅದರ ಆಧಾರದಲ್ಲಿ ಶನಿವಾರ ಅಕ್ಷಯ್‌ ಅವರು ಬೇಗೂರಿನಿಂದ ಮೈಸೂರಿನತ್ತ ಪಾದಯಾತ್ರೆಯಲ್ಲಿ ತೆರಳುತ್ತಿದ್ದಾಗ ಪೊಲೀಸರು ಅವರನ್ನು ತಡೆದು, ಟೀಶರ್ಟ್‌ ತೆಗೆಸಿ ವಶಕ್ಕೆ ಪಡೆದಿದ್ದಾರೆ.

ಠಾಣೆ ಜಾಮೀನಿನ ಮೇಲೆ ಅವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT