ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25ರಂದು ಬೃಹತ್ ಬೈಕ್ ರ‍್ಯಾಲಿ: ವಾಟಾಳ್‌

Last Updated 19 ಮಾರ್ಚ್ 2023, 7:36 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಅಭಿವೃದ್ದಿಗಾಗಿ ಸರ್ಕಾರದ ಗಮನ ಸೆಳೆಯಲು ಇದೇ 25 ರಂದು ನಗರದಲ್ಲಿ ಬೃಹತ್ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪಕ್ಷದ ಮುಖಂಡರೊಂದಿಗೆ ಮಾತನಾಡಿದ ಅವರು, ‘ಎಲ್ಲ ಸರ್ಕಾರಗಳೂ ಜಿಲ್ಲೆಯನ್ನು ಕಡೆಗಣಿಸಿವೆ. ‘ಚಾಮರಾಜನಗರ ಶಾಪಗ್ರಸ್ತ ಜಿಲ್ಲೆ. ಅಲ್ಲಿಗೆ ಹೋದರೆ ಅಧಿಕಾರ ಹೋಗುತ್ತದೆ’ ಎಂದು ತಪ್ಪು ಸಂದೇಶ ಹುಟ್ಟುಹಾಕಿದ್ದಾರೆ’ ಎಂದು ದೂರಿದರು.

‘ಚಾಮರಾಜನಗರ ಅಭಿವೃದ್ದಿಗೆ ಸರ್ಕಾರದ ಗಮನ ಸೆಳೆಯಲು 25ರಂದು ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ನಂತರ ನಗರ ಪ್ರಮುಖ ಬೀದಿ ಸಂಚರಿಸಲಿದೆ’ ಎಂದರು.

ಹುಂಡಿಬಸವಣ್ಣ, ರೇವಣ್ಣಸ್ವಾಮಿ, ವರದರಾಜು, ಚಾ.ರಂ.ಶ್ರೀನಿವಾಸಗೌಡ, ನಿಜಧ್ವನಿ ಗೋವಿಂದರಾಜು, ಚಾ.ರಾ.ಕುಮಾರ್, ಗೋಪಾಲ್‌ನಾಯಕ, ರಾಮಯ್ಯ, ಶಿವಲಿಂಗಮೂರ್ತಿ, ಕುಮಾರ್, ಚಾ.ಹ.ರಾಮು, ತಾಂಡವಮೂರ್ತಿ, ಸಾಗರ್‌ರಾವತ್, ಗೋಪಿ, ಪಣ್ಯದಹುಂಡಿ ರಾಜು ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT