ಶೀಘ್ರದಲ್ಲೇ ಭಕ್ತರಿಗೆ ಮುಕ್ತ: ದೇವಾಲಯದ ಚಾವಣಿ ಸುತ್ತಲೂ ದೇವ–ದೇವತೆಯರನ್ನು ಅಲಂಕರಿಸುವ ಕೆಲಸ ಮುಗಿದಿದೆ. ಎಲೆಕ್ಟ್ರಿಕಲ್, ಸುತ್ತುಗೋಡೆ ಕೆಲಸಗಳು ವೇಗವಾಗಿ ಸಾಗುತ್ತಿವೆ. ಪ್ರವೇಶ ದ್ವಾರದ ಶಿಲ್ಪಗಳು ಮತ್ತು ನೆಲಕ್ಕೆ ನುಣುಪು ಕೊಡುವ ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿವೆ. 2021ರ ದೊಡ್ಡಜಾತ್ರೆ ಮತ್ತು ಸಂಕ್ರಾಂತಿ ಉತ್ಸವಗಳನ್ನು ಆಚರಿಸಲು ಅಗತ್ಯ ಸಿದ್ಧತೆ ನಡೆಸಲಾಗಿದೆ. ಹಾಗಾಗಿ, ಕಾಮಗಾರಿಗೆ ವೇಗ ದೊರೆತಿದೆ. ಜನವರಿ ಮಾಸದಲ್ಲಿ ಭಕ್ತರ ದರ್ಶನಕ್ಕೆ ದೇಗುಲ ಮುಕ್ತಗೊಳ್ಳಲಿದೆ ಎಂದು ಶಾಸಕ ಎನ್. ಮಹೇಶ್ ಹೇಳಿದರು.