‘ನೋಟಿಸ್ ನೀಡಿಲ್ಲ, ಕಾರಣ ಗೊತ್ತಿಲ್ಲ’
ದಯಾನಿಧಿ ಅವರು ಪ್ರತಿಕ್ರಿಯಿಸಿ, ‘ನನಗೆ ವಿಚಾರ ಗೊತ್ತಿರಲಿಲ್ಲ. ಮಾಧ್ಯಮದವರು ಹೇಳಿದಾಗಲಷ್ಟೇ ಗೊತ್ತಾಗಿದೆ. ಯಾವ ಕಾರಣಕ್ಕೆ ಉಚ್ಚಾಟನೆ ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಕಾರಣ ಕೇಳಿ ನೋಟಿಸ್ ಕೂಡ ನೀಡಿಲ್ಲ. ಅಚ್ಚರಿಯ ಜೊತೆಗೆ ದಿಗ್ಭ್ರಮೆಯಾಗಿದೆ. ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಕೆಲಸ ಮಾಡುತ್ತಾ ಬಂದಿದ್ದೇನೆ. ಮುಖಂಡರ ಕೆಲವು ನಿರ್ಣಯಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ದು ನಿಜ. ಚಾಮುಲ್ ಅಧ್ಯಕ್ಷರ ಚುನಾವಣೆಯಲ್ಲೂ ಅಭ್ಯರ್ಥಿ ಬದಲಿಸಿದಾಗ ಆಕ್ಷೇಪಿಸಿದ್ದೆ. ಆದರೆ ಅದು ಪಕ್ಷದ ವಿರೋಧಿ ಚಟುವಟಿಕೆ ಹೇಗಾಗುತ್ತದೆ? ಈ ಬಗ್ಗೆ ಕೂಲಂಕಷವಾಗಿ ವಿಚಾರಿಸಿ ನಂತರ ಪ್ರತಿಕ್ರಿಯಿಸುವೆ’ ಎಂದರು.