ಬಳಿಕ ಅಲ್ಲಿಂದ ಕೆ.ಗುಡಿಯಲ್ಲಿರುವ ಜಂಗಲ್ ಲಾಡ್ಜಸ್ ಹಾಗೂ ರೆಸಾರ್ಟ್ಸ್ಗೆ ತೆರಳಿ ವಿಶ್ರಾಂತಿ ಪಡೆದು, ಮಧ್ಯಾಹ್ನದ ಭೋಜನವನ್ನೂ ಮಾಡಿದರು. ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪ್ ಜೆ. ಕಾಂಟ್ರಾಕ್ಟರ್ ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಹುಲಿ ಯೋಜನೆ ಹಾಗೂ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದರು. ಕೆ.ಗುಡಿ ವಲಯದ ಸಿಬ್ಬಂದಿಯವರೊಂದಿಗೆ ಬೆರೆತ ಅವರು, ಸಂಜೆಯ ವೇಳೆಗೆ ಬಂಡೀಪುರಕ್ಕೆ ತೆರಳಿದರು.