ಹನೂರು:ಕಣ್ಣುಹಾಯಿಸಿದಷ್ಟೂ ದೂರಕ್ಕೂ ಹರಡಿಕೊಂಡಿದ್ದ ಜನಸ್ತೋಮ, ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ಆರಾಧ್ಯ ದೈವವನ್ನು ಸ್ಮರಿಸುತ್ತಿದ್ದ ಭಕ್ತಸಮೂಹ, ಬೆಳಗುವ ದೀಪದ ಮಧ್ಯೆ ಜಾಗಟೆ ಶಬ್ದ, ಇವೆಲ್ಲವನ್ನು ಮೀರಿ ಇಡೀ ಕ್ಷೇತ್ರವನ್ನೇ ಆವರಿಸಿತ್ತು 'ಸಿದ್ದಯ್ಯ ಸ್ವಾಮಿ ಬನ್ನಿ, ಪವಾಡ ಗೆದ್ದಯ್ಯ ನೀವೆ ಬನ್ನಿ, ಮಂಟೇದಾ ನೀವೆ ಬನ್ನಿ….' ಪಾರ್ಥನೆ.