<p><strong>ಚಾಮರಾಜನಗರ</strong>: ದೇಶದ ಮೇಲಿನ ಭಯೋತ್ಪಾದನಾ ಕೃತ್ಯಕ್ಕೆ ಪ್ರತೀಕಾರವಾಗಿ ಪಾಕಿಸ್ತಾನಕ್ಕೆ ಪಾಠ ಕಲಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರಕ್ಕೆ ಹಾಗೂ ನಾಯಕತ್ವಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಮರಿಯಾಲ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ತಿಳಿಸಿದರು.</p>.<p>ನಗರದ ವಿರಕ್ತ ಮಠದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕೆಲವು ದಿನಗಳಿಂದ ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷ ನಡೆಯುತ್ತಿದ್ದು, ಮುಗ್ದ ಜನರ ಸಾವು–ನೋವುಗಳಿಂದ ನೋವುಂಟಾಗಿದೆ. ದೇಶದಲ್ಲಿ ಶಾಂತಿ ನೆಲೆಸಬೇಕು ಎಂಬುದು ಮಠಾಧೀಶರ ಆಶಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ವಿಶ್ವಾಸ ಇರಿಸಿಕೊಂಡಿದ್ದೇವೆ’ ಎಂದರು.</p>.<p>ದೇಶದ ಭದ್ರತೆ ಹಾಗೂ ಸುರಕ್ಷತೆಯ ವಿಚಾರದಲ್ಲಿ ಪ್ರಧಾನಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬೆಂಬಲ ನೀಡಲಿದ್ದೇವೆ. ಯುದ್ಧ ಅನಿವಾರ್ಯತೆಯ ನಿರ್ಣಯಕ್ಕೂ ಬೆಂಬಲ ಇದೆ. ಮೋದಿ ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕರಾಗಿದ್ದು ಸದಾ ದೇಶದ ಅಭಿವೃದ್ಧಿ ಹಾಗೂ ಒಳಿತು ಬಯಸುತ್ತಾರೆ. ಆಧ್ಯಾತ್ಮಿಕತೆಗೆ ಒತ್ತು ನೀಡುವ ಮೂಲಕ ದೇಶದ ಸಂಸ್ಕೃತಿ, ಪರಂಪರೆಗೆ ಪೂರಕವಾಗಿ ತೆಗೆದುಕೊಳ್ಳುತ್ತಿರುವ ಅವರ ನಿರ್ಧಾರಗಳು ದೇಶದ ಒಳಿತಿಗೆ ಕಾರಣವಾಗಿವೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು. </p>.<p>ಧರ್ಮದ ಹೆಸರಿನಲ್ಲಿ ಪಹಲ್ಗಾಮ್ನಲ್ಲಿ ಅಮಾಯಕ ಭಾರತೀಯ ಹತ್ಯೆ ಮಾಡಿರುವುದು ಖಂಡನೀಯ. ಭಯೋತ್ಪಾದನೆಯ ನಿರ್ನಾಮಕ್ಕೆ ದೇಶದ ಸೈನಿಕರು ಹಾಗೂ ಪ್ರಧಾನಿ ಮೋದಿ ಅವರಿಗೆ ಸರ್ವರ ಆಶೀರ್ವಾದ ಹಾಗೂ ಬೆಂಬಲ ಇರುತ್ತದೆ. ಮೋದಿ ಅವರ ನಾಯಕತ್ವದಲ್ಲಿ ಯುದ್ಧ ಗೆಲ್ಲಲು ಭಾರತೀಯರೆಲ್ಲರೂ ಪಕ್ಷಾತೀತ ಹಾಗೂ ಧರ್ಮಾತೀತವಾಗಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.</p>.<p>ನಗರ ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, ಶರಣ ಬಸವಣ್ಣನವರ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಪ್ರಧಾನಿ ಮೋದಿ ಸಂಸತ್ನಲ್ಲಿ ಬಸವಣ್ಣನವರ ಮೂರ್ತಿ ಸ್ಥಾಪಿಸಿ ಬಸವೇಶ್ವರರ ವಚನಗಳ ಸಾಲುಗಳನ್ನು ಕೆತ್ತಿಸಿದ್ದಾರೆ. ಕೇಂದ್ರ ಸಚಿವ ವಿ. ಸೋಮಣ್ಣ ನೇತೃತ್ವದಲ್ಲಿ ಸಂಸತ್ನಲ್ಲಿ ಅದ್ದೂರಿಯಾಗಿ ಬಸವ ಜಯಂತಿ ಆಚರಣೆಯಾಗಿರುವುದು ಸಂತಸ ತಂದಿದೆ ಎಂದರು.</p>.<p>ಸುದ್ದಿಗೋಷ್ಠಿಯಲ್ಲಿ ಶಿವಾಚಾರ್ಯ ಸ್ವಾಮೀಜಿ, ಕೊತ್ತಲವಾಡಿ ಪಟ್ಟದ ಮಠಾಧ್ಯಕ್ಷ ಗುರು ಸ್ವಾಮೀಜಿ, ಉಗನೇದ ಹುಂಡಿ ಮಠಾಧ್ಯಕ್ಷ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಉಪಸ್ಥಿತರಿದ್ದರು. ಮುಖಂಡರಾದ ಅಮ್ಮನಪುರ ಮಲ್ಲೇಶ್, ಕೊತ್ತಲವಾಡಿ ಕುಮಾರ್, ನಟರಾಜು ಇದ್ದರು.</p>.<p>ಭಾರತ - ಪಾಕಿಸ್ತಾನ ಯುದ್ಧ ಪ್ರಧಾನಿ ಮೋದಿಗೆ ಮಠಾಧೀಶರ ಬೆಂಬಲ: ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಧರ್ಮದ ನೆಪದಲ್ಲಿ ಮುಗ್ಧ ಭಾರತೀಯರನ್ನು ಕೊಲ್ಲಲು ಸಂಚು ಮಾಡುತ್ತಿರುವುದು ಖಂಡನೀಯಚಾಮರಾಜನಗರ: ಭಾರತ- ಪಾಕಿಸ್ತಾನ ಯುದ್ದ ಸಕಲ ರೀತಿಯಲ್ಲೂ ಪ್ರಧಾನಿ ಮೋದಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಮರಿಯಾಲ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು. ನಗರದ ಸಿದ್ದಮಲ್ಲೇಶ್ವರ ವಿರಕ್ತಮಠದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,ಕಳೆದ ಮೂರು ನಾಲ್ಕು ದಿನಗಳಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಆರಂಭಗೊಂಡು ಅನೇಕ ಮುಗ್ಧ ಜನರ ಸಾವು ನೋವು ಉಂಟಾಗಿದೆ. ಭಾರತದವರಾಗಲಿ ಪಾಕಿಸ್ತಾನದವರಾಗಲಿ ಮುಗ್ಧ ಜನರ ಸಾವು ನೋವು ನಮಗೆ ನೋವುಂಟು ಮಾಡುವಂತಹ ಘಟನೆಗಳಾಗಿವೆ ಎಂದರು. ನಾವು ಯಾವಾಗಲೂ ಜನತೆ ಶಾಂತಿಯಿಂದ ಬಾಳಬೇಕು ಎಂದು ಹಾರೈಸುತ್ತೇವೆ. ಆದರೂ ಈ ನಾಡಿನ ಈ ಮಣ್ಣಿನ ಋಣ ತೀರಿಸುವುದಕ್ಕಾಗಿ ನಾವು ಭಾರತ ದೇಶದ ಪ್ರಧಾನಿಗಳಾದ ನರೇಂದ್ರ ಮೊದಿ ಅವರ ನಾಯಕತ್ವವನ್ನು ಒಪ್ಪಿದ್ದೇವೆ ಹಾಗೂ ಅವರ ಯುದ್ಧದ ನಿರ್ಣಯಗಳನ್ನು ಬೆಂಬಲಿಸುತ್ತೇವೆ. ನರೇಂದ್ರ ಮೋದಿಯವರು ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕ ವ್ಯಕ್ತಿಯಾಗಿದ್ದು ಸದಾ ದೇಶದ ಅಭಿವೃದ್ಧಿ ಹಾಗೂ ಒಳಿತನ್ನು ಬಯಸುತ್ತಿರುವ ಮಹಾ ನಾಯಕರಾಗಿದ್ದಾರೆ ಎಂದರು. ಪಾಕಿಸ್ತಾನದಿಂದ ಬಂದ ಉಗ್ರವಾದಿಗಳು ಮುಗ್ಧ ಭಾರತೀಯರನ್ನ ಧರ್ಮದ ನೆಪದಲ್ಲಿ ಕೊಂದು ಹಾಕಿರುವುದನ್ನು ನಾವು ಖಂಡಿಸುತ್ತೇವೆ ಹಾಗೂ ಈ ಬಗ್ಗೆ ಸೇಡು ತೀರಿಸಿಕೊಳ್ಳಲು ಹೊರಟಿರುವ ಭಾರತ ದೇಶದ ಪ್ರಧಾನಿ ಮೋದಿ ಅವರಿಗೆ ನಾವು ಆಶೀರ್ವಾದ, ಬೆಂಬಲ ನೀಡುತ್ತೇವೆ. ಪಾಕಿಸ್ತಾನ ಒಂದು ರೋಗಗ್ರಸ್ತ ದೇಶವಾಗಿದ್ದು ಧರ್ಮದ ನೆಪದಲ್ಲಿ ಮುಗ್ಧ ಭಾರತೀಯರನ್ನು ಕೊಲ್ಲಲು ಸಂಚು ಮಾಡುತ್ತಿರುವುದು ಖಂಡನೀಯವಾಗಿದೆಮೋದಿಯವರ ನಾಯಕತ್ವದಲ್ಲಿ ಈ ಯುದ್ಧವನ್ನು ಗೆಲ್ಲಲು ಭಾರತೀಯರಾದ ನಾವು ಪಕ್ಷಾತೀತವಾಗಿ ಹಾಗೂ ಧರ್ಮಾತೀತವಾಗಿ ಬೆಂಬಲ ನೀಡಬೇಕು. ಪ್ರಧಾನಿ ಮೋದಿಯವರಿಗೆ ಕರ್ನಾಟಕದ ಬಗ್ಗೆ ವಿಶೇಷವಾಗಿ 12ನೇ ಶತಮಾನದ ಶರಣ ಬಸವಣ್ಣನವರ ಬಗ್ಗೆ ಅಪಾರ ಪ್ರೀತಿ ಉಳ್ಳವರಾಗಿದ್ದು ಪಾರ್ಲಿಮೆಂಟ್ನಲ್ಲಿ ಬಸವಣ್ಣನವರ ಮೂರ್ತಿಯನ್ನು ಸ್ಥಾಪಿಸಿದ್ದು ಅಲ್ಲಿ ಶ್ರೀ ಬಸವೇಶ್ವರರವರ ವಚನಗಳನ್ನು ಕೆತ್ತಿಸಿದ್ದಾರೆ. ಈ ಬಾರಿ. ಪಾರ್ಲಿಮೆಂಟಿನಲ್ಲಿ ಅದ್ದೂರಿಯಾಗಿ ಕೇಂದ್ರ ಸರ್ಕಾರದ ಖರ್ಚು ವೆಚ್ಚದಲ್ಲಿ ಬಸವ ಜಯಂತಿಯನ್ನು ಆರಂಭಿಸುವುದರ ಮೂಲಕ ಒಂದು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಕೇಂದ್ರ ಸಚಿವರಾದ ಸೋಮಣ್ಣನವರಿಗೆ ಪೂರ್ಣ ಬೆಂಬಲ ನೀಡಿ ಬಸವ ಜಯಂತಿಯನ್ನು ಆಚರಿಸಿದ್ದಾರೆ ಈ ಕಾರಣಕ್ಕಾಗಿ ಕರ್ನಾಟಕದ ಮಠಾಧೀಶರಾದ ನಾವುಗಳು ಮೋದಿಯವರನ್ನು ಹಾಗೂ ಕೇಂದ್ರ ಸಚಿವ ಸೋಮಣ್ಣನವರನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಹಾಗೂ ಆಶೀರ್ವಾದ ನೀಡುವುದಾಗಿ ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಶ್ರೀಚೆನ್ನ ಬಸವಾಸ್ವಾಮೀಜಿ , ಹಂಡ್ರಕಳ್ಳಿ ಮಠದ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ನರೇಂದ್ರ ಮೊದಿ ಅವರ ನಾಯಕತ್ವವನ್ನು ಒಪ್ಪಿದ್ದೇವೆ ಹಾಗೂ ಅವರ ಯುದ್ಧದ ನಿರ್ಣಯಗಳನ್ನು ಬೆಂಬಲಿಸುತ್ತೇವೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಉಗನೇದಹುಂಡಿ ಮಠದ ಶ್ರೀ ಗುರುಸಿದ್ಧಸ್ವಾಮೀಜಿ, ಕೊತ್ತಲವಾಡಿ ಮಠದ ಶ್ರೀ ಗುರುಸ್ವಾಮೀಜಿ, ರೈತ ಮುಖಂಡ ಮಲ್ಲೇಶ, ನಟರಾಜು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ದೇಶದ ಮೇಲಿನ ಭಯೋತ್ಪಾದನಾ ಕೃತ್ಯಕ್ಕೆ ಪ್ರತೀಕಾರವಾಗಿ ಪಾಕಿಸ್ತಾನಕ್ಕೆ ಪಾಠ ಕಲಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರಕ್ಕೆ ಹಾಗೂ ನಾಯಕತ್ವಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಮರಿಯಾಲ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ತಿಳಿಸಿದರು.</p>.<p>ನಗರದ ವಿರಕ್ತ ಮಠದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕೆಲವು ದಿನಗಳಿಂದ ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷ ನಡೆಯುತ್ತಿದ್ದು, ಮುಗ್ದ ಜನರ ಸಾವು–ನೋವುಗಳಿಂದ ನೋವುಂಟಾಗಿದೆ. ದೇಶದಲ್ಲಿ ಶಾಂತಿ ನೆಲೆಸಬೇಕು ಎಂಬುದು ಮಠಾಧೀಶರ ಆಶಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ವಿಶ್ವಾಸ ಇರಿಸಿಕೊಂಡಿದ್ದೇವೆ’ ಎಂದರು.</p>.<p>ದೇಶದ ಭದ್ರತೆ ಹಾಗೂ ಸುರಕ್ಷತೆಯ ವಿಚಾರದಲ್ಲಿ ಪ್ರಧಾನಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬೆಂಬಲ ನೀಡಲಿದ್ದೇವೆ. ಯುದ್ಧ ಅನಿವಾರ್ಯತೆಯ ನಿರ್ಣಯಕ್ಕೂ ಬೆಂಬಲ ಇದೆ. ಮೋದಿ ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕರಾಗಿದ್ದು ಸದಾ ದೇಶದ ಅಭಿವೃದ್ಧಿ ಹಾಗೂ ಒಳಿತು ಬಯಸುತ್ತಾರೆ. ಆಧ್ಯಾತ್ಮಿಕತೆಗೆ ಒತ್ತು ನೀಡುವ ಮೂಲಕ ದೇಶದ ಸಂಸ್ಕೃತಿ, ಪರಂಪರೆಗೆ ಪೂರಕವಾಗಿ ತೆಗೆದುಕೊಳ್ಳುತ್ತಿರುವ ಅವರ ನಿರ್ಧಾರಗಳು ದೇಶದ ಒಳಿತಿಗೆ ಕಾರಣವಾಗಿವೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು. </p>.<p>ಧರ್ಮದ ಹೆಸರಿನಲ್ಲಿ ಪಹಲ್ಗಾಮ್ನಲ್ಲಿ ಅಮಾಯಕ ಭಾರತೀಯ ಹತ್ಯೆ ಮಾಡಿರುವುದು ಖಂಡನೀಯ. ಭಯೋತ್ಪಾದನೆಯ ನಿರ್ನಾಮಕ್ಕೆ ದೇಶದ ಸೈನಿಕರು ಹಾಗೂ ಪ್ರಧಾನಿ ಮೋದಿ ಅವರಿಗೆ ಸರ್ವರ ಆಶೀರ್ವಾದ ಹಾಗೂ ಬೆಂಬಲ ಇರುತ್ತದೆ. ಮೋದಿ ಅವರ ನಾಯಕತ್ವದಲ್ಲಿ ಯುದ್ಧ ಗೆಲ್ಲಲು ಭಾರತೀಯರೆಲ್ಲರೂ ಪಕ್ಷಾತೀತ ಹಾಗೂ ಧರ್ಮಾತೀತವಾಗಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.</p>.<p>ನಗರ ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, ಶರಣ ಬಸವಣ್ಣನವರ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಪ್ರಧಾನಿ ಮೋದಿ ಸಂಸತ್ನಲ್ಲಿ ಬಸವಣ್ಣನವರ ಮೂರ್ತಿ ಸ್ಥಾಪಿಸಿ ಬಸವೇಶ್ವರರ ವಚನಗಳ ಸಾಲುಗಳನ್ನು ಕೆತ್ತಿಸಿದ್ದಾರೆ. ಕೇಂದ್ರ ಸಚಿವ ವಿ. ಸೋಮಣ್ಣ ನೇತೃತ್ವದಲ್ಲಿ ಸಂಸತ್ನಲ್ಲಿ ಅದ್ದೂರಿಯಾಗಿ ಬಸವ ಜಯಂತಿ ಆಚರಣೆಯಾಗಿರುವುದು ಸಂತಸ ತಂದಿದೆ ಎಂದರು.</p>.<p>ಸುದ್ದಿಗೋಷ್ಠಿಯಲ್ಲಿ ಶಿವಾಚಾರ್ಯ ಸ್ವಾಮೀಜಿ, ಕೊತ್ತಲವಾಡಿ ಪಟ್ಟದ ಮಠಾಧ್ಯಕ್ಷ ಗುರು ಸ್ವಾಮೀಜಿ, ಉಗನೇದ ಹುಂಡಿ ಮಠಾಧ್ಯಕ್ಷ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಉಪಸ್ಥಿತರಿದ್ದರು. ಮುಖಂಡರಾದ ಅಮ್ಮನಪುರ ಮಲ್ಲೇಶ್, ಕೊತ್ತಲವಾಡಿ ಕುಮಾರ್, ನಟರಾಜು ಇದ್ದರು.</p>.<p>ಭಾರತ - ಪಾಕಿಸ್ತಾನ ಯುದ್ಧ ಪ್ರಧಾನಿ ಮೋದಿಗೆ ಮಠಾಧೀಶರ ಬೆಂಬಲ: ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಧರ್ಮದ ನೆಪದಲ್ಲಿ ಮುಗ್ಧ ಭಾರತೀಯರನ್ನು ಕೊಲ್ಲಲು ಸಂಚು ಮಾಡುತ್ತಿರುವುದು ಖಂಡನೀಯಚಾಮರಾಜನಗರ: ಭಾರತ- ಪಾಕಿಸ್ತಾನ ಯುದ್ದ ಸಕಲ ರೀತಿಯಲ್ಲೂ ಪ್ರಧಾನಿ ಮೋದಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಮರಿಯಾಲ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು. ನಗರದ ಸಿದ್ದಮಲ್ಲೇಶ್ವರ ವಿರಕ್ತಮಠದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,ಕಳೆದ ಮೂರು ನಾಲ್ಕು ದಿನಗಳಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಆರಂಭಗೊಂಡು ಅನೇಕ ಮುಗ್ಧ ಜನರ ಸಾವು ನೋವು ಉಂಟಾಗಿದೆ. ಭಾರತದವರಾಗಲಿ ಪಾಕಿಸ್ತಾನದವರಾಗಲಿ ಮುಗ್ಧ ಜನರ ಸಾವು ನೋವು ನಮಗೆ ನೋವುಂಟು ಮಾಡುವಂತಹ ಘಟನೆಗಳಾಗಿವೆ ಎಂದರು. ನಾವು ಯಾವಾಗಲೂ ಜನತೆ ಶಾಂತಿಯಿಂದ ಬಾಳಬೇಕು ಎಂದು ಹಾರೈಸುತ್ತೇವೆ. ಆದರೂ ಈ ನಾಡಿನ ಈ ಮಣ್ಣಿನ ಋಣ ತೀರಿಸುವುದಕ್ಕಾಗಿ ನಾವು ಭಾರತ ದೇಶದ ಪ್ರಧಾನಿಗಳಾದ ನರೇಂದ್ರ ಮೊದಿ ಅವರ ನಾಯಕತ್ವವನ್ನು ಒಪ್ಪಿದ್ದೇವೆ ಹಾಗೂ ಅವರ ಯುದ್ಧದ ನಿರ್ಣಯಗಳನ್ನು ಬೆಂಬಲಿಸುತ್ತೇವೆ. ನರೇಂದ್ರ ಮೋದಿಯವರು ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕ ವ್ಯಕ್ತಿಯಾಗಿದ್ದು ಸದಾ ದೇಶದ ಅಭಿವೃದ್ಧಿ ಹಾಗೂ ಒಳಿತನ್ನು ಬಯಸುತ್ತಿರುವ ಮಹಾ ನಾಯಕರಾಗಿದ್ದಾರೆ ಎಂದರು. ಪಾಕಿಸ್ತಾನದಿಂದ ಬಂದ ಉಗ್ರವಾದಿಗಳು ಮುಗ್ಧ ಭಾರತೀಯರನ್ನ ಧರ್ಮದ ನೆಪದಲ್ಲಿ ಕೊಂದು ಹಾಕಿರುವುದನ್ನು ನಾವು ಖಂಡಿಸುತ್ತೇವೆ ಹಾಗೂ ಈ ಬಗ್ಗೆ ಸೇಡು ತೀರಿಸಿಕೊಳ್ಳಲು ಹೊರಟಿರುವ ಭಾರತ ದೇಶದ ಪ್ರಧಾನಿ ಮೋದಿ ಅವರಿಗೆ ನಾವು ಆಶೀರ್ವಾದ, ಬೆಂಬಲ ನೀಡುತ್ತೇವೆ. ಪಾಕಿಸ್ತಾನ ಒಂದು ರೋಗಗ್ರಸ್ತ ದೇಶವಾಗಿದ್ದು ಧರ್ಮದ ನೆಪದಲ್ಲಿ ಮುಗ್ಧ ಭಾರತೀಯರನ್ನು ಕೊಲ್ಲಲು ಸಂಚು ಮಾಡುತ್ತಿರುವುದು ಖಂಡನೀಯವಾಗಿದೆಮೋದಿಯವರ ನಾಯಕತ್ವದಲ್ಲಿ ಈ ಯುದ್ಧವನ್ನು ಗೆಲ್ಲಲು ಭಾರತೀಯರಾದ ನಾವು ಪಕ್ಷಾತೀತವಾಗಿ ಹಾಗೂ ಧರ್ಮಾತೀತವಾಗಿ ಬೆಂಬಲ ನೀಡಬೇಕು. ಪ್ರಧಾನಿ ಮೋದಿಯವರಿಗೆ ಕರ್ನಾಟಕದ ಬಗ್ಗೆ ವಿಶೇಷವಾಗಿ 12ನೇ ಶತಮಾನದ ಶರಣ ಬಸವಣ್ಣನವರ ಬಗ್ಗೆ ಅಪಾರ ಪ್ರೀತಿ ಉಳ್ಳವರಾಗಿದ್ದು ಪಾರ್ಲಿಮೆಂಟ್ನಲ್ಲಿ ಬಸವಣ್ಣನವರ ಮೂರ್ತಿಯನ್ನು ಸ್ಥಾಪಿಸಿದ್ದು ಅಲ್ಲಿ ಶ್ರೀ ಬಸವೇಶ್ವರರವರ ವಚನಗಳನ್ನು ಕೆತ್ತಿಸಿದ್ದಾರೆ. ಈ ಬಾರಿ. ಪಾರ್ಲಿಮೆಂಟಿನಲ್ಲಿ ಅದ್ದೂರಿಯಾಗಿ ಕೇಂದ್ರ ಸರ್ಕಾರದ ಖರ್ಚು ವೆಚ್ಚದಲ್ಲಿ ಬಸವ ಜಯಂತಿಯನ್ನು ಆರಂಭಿಸುವುದರ ಮೂಲಕ ಒಂದು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಕೇಂದ್ರ ಸಚಿವರಾದ ಸೋಮಣ್ಣನವರಿಗೆ ಪೂರ್ಣ ಬೆಂಬಲ ನೀಡಿ ಬಸವ ಜಯಂತಿಯನ್ನು ಆಚರಿಸಿದ್ದಾರೆ ಈ ಕಾರಣಕ್ಕಾಗಿ ಕರ್ನಾಟಕದ ಮಠಾಧೀಶರಾದ ನಾವುಗಳು ಮೋದಿಯವರನ್ನು ಹಾಗೂ ಕೇಂದ್ರ ಸಚಿವ ಸೋಮಣ್ಣನವರನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಹಾಗೂ ಆಶೀರ್ವಾದ ನೀಡುವುದಾಗಿ ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಶ್ರೀಚೆನ್ನ ಬಸವಾಸ್ವಾಮೀಜಿ , ಹಂಡ್ರಕಳ್ಳಿ ಮಠದ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ನರೇಂದ್ರ ಮೊದಿ ಅವರ ನಾಯಕತ್ವವನ್ನು ಒಪ್ಪಿದ್ದೇವೆ ಹಾಗೂ ಅವರ ಯುದ್ಧದ ನಿರ್ಣಯಗಳನ್ನು ಬೆಂಬಲಿಸುತ್ತೇವೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಉಗನೇದಹುಂಡಿ ಮಠದ ಶ್ರೀ ಗುರುಸಿದ್ಧಸ್ವಾಮೀಜಿ, ಕೊತ್ತಲವಾಡಿ ಮಠದ ಶ್ರೀ ಗುರುಸ್ವಾಮೀಜಿ, ರೈತ ಮುಖಂಡ ಮಲ್ಲೇಶ, ನಟರಾಜು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>