<p><strong>ಚಾಮರಾಜನಗರ</strong>: ಮಾರುಕಟ್ಟೆಯಲ್ಲಿ ಬೀನ್ಸ್ ದರ ಭಾರಿ ಜಿಗಿತ ಕಂಡಿದ್ದು ದ್ವಿಶತಕದ ಗಡಿ ತಲುಪಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಬೀನ್ಸ್ ಬರೋಬ್ಬರಿ ₹ 180ರಿಂದ 200ರವರೆಗೆ ಮಾರಾಟವಾಗುತ್ತಿದೆ. ಈ ವರ್ಷದಲ್ಲಿ ದಾಖಲಾದ ಅತ್ಯಂತ ಗರಿಷ್ಠ ದರ ಇದಾಗಿದೆ.</p>.<p>ಕಳೆದ ಒಂದು ತಿಂಗಳಿನಿಂದಲೂ ಏರುಗತಿಯಲ್ಲಿದ್ದ ಬೀನ್ಸ್ ₹ 100 ರಿಂದ 120ರ ಆಸುಪಾಸಿನಲ್ಲಿತ್ತು. ಪ್ರಸ್ತುತ ದಿಢೀರ್ ದರ ಹೆಚ್ಚಾಗಿದ್ದು, ಗ್ರಾಹಕರು ಹಾಗೂ ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ.</p>.<p>ದರ ಏರಿಕೆಗೆ ಕಾರಣ: ಅತಿಯಾದ ಬಿಸಿಲು, ಪೂರ್ವ ಮುಂಗಾರು ಮಳೆ ಕೊರತೆ, ಬೀನ್ಸ್ ಬೆಳೆ ಕ್ಷೇತ್ರ ಕುಸಿತ, ರೋಗ ಬಾಧೆ ಸಹಿತ ಹಲವು ಕಾರಣಗಳಿಂದ ಬೀನ್ಸ್ ದರ ಹೆಚ್ಚಳವಾಗಿದೆ. ತೀವ್ರ ಮಳೆ ಕೊರತೆಯಿಂದ ಇಳುವರಿ ಕುಸಿದಿದ್ದು, ಮಾರುಕಟ್ಟೆಯ ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ.</p>.<p>‘ಹೆಚ್ಚು ತರಕಾರಿ ಬೆಳೆಯುವ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಿಂದಲೂ ಪೂರೈಕೆ ಇಳಿಮುಖವಾಗಿರುವುದು’ ಬೆಲೆ ಏರಿಕೆಗೆ ಕಾರಣ ಎನ್ನುತ್ತಾರೆ ವ್ಯಾಪಾರಿಗಳು.</p>.<p>‘ಜಿಲ್ಲೆಯು ಬಹುತೇಕ ಮಳೆಯಾಶ್ರಿತ ಕೃಷಿ ಭೂಮಿ ಹೊಂದಿರುವುದರಿಂದ ಬೇಡಿಕೆಯಷ್ಟು ಬೀನ್ಸ್ ಬೆಳೆಯುವುದಿಲ್ಲ, ಗ್ರೀನ್ ಹೌಸ್, ಹನಿ ನೀರಾವರಿ ಸೌಲಭ್ಯ ಹಾಗೂ ನಾಲೆಗಳ ನೀರು ಲಭ್ಯತೆ ಇರುವ ಕಡೆಗಳಲ್ಲಿ ಮಾತ್ರ ಬೆಳೆಯಲಾಗುತ್ತದೆ. ಈ ವರ್ಷ ಅಂತರ್ಜಲ ತೀವ್ರ ಕುಸಿತವಾಗಿರುವುದು ಹಾಗೂ ಕೊಳವೆ ಬಾವಿಗಳು ಬಹುತೇಕ ಬರಿದಾಗಿರುವುದು ತರಕಾರಿ ಬೆಳೆಯಲು ಹಿನ್ನಡೆಯನ್ನುಂಟು ಮಾಡಿದೆ’ ಎಂಬುದು ರೈತರ ಅಭಿಪ್ರಾಯ.</p>.<p>‘ಮದುವೆ, ಗೃಹ ಪ್ರವೇಶ ಸಹಿತ ಶುಭ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ದರವು ಏರಿಕೆಯಾಗಿದೆ. ಬೇಸಿಗೆಯ ರಜೆ ಇರುವುದರಿಂದ ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರುವುದು ಕೂಡ ತರಕಾರಿ ದರಗಳು ಹೆಚ್ಚಾಗಲು ಕಾರಣವಾಗಿದೆ’ ಎನ್ನುತ್ತಾರೆ ವ್ಯಾಪಾರಿ ಮಧುಸೂದನ್.</p>.<p>‘ಕಳೆದ ವಾರ ಕೆ.ಜಿಗೆ ₹ 60 ದಾಟಿದ್ದ ಟೊಮೆಟೊ ದರ ಅಲ್ಪ ಇಳಿಕೆಯಾಗಿದ್ದು ₹40 ರಿಂದ ₹50ಕ್ಕೆ ಸಿಗುತ್ತಿದೆ, ಮಾರುಕಟ್ಟೆಗೆ ಪೂರೈಕೆ ಹೆಚ್ಚಾಗಿರುವುದು ದರ ಕುಸಿತಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ವ್ಯಾಪಾರಿಗಳು.</p>.<p>ತಿಂಗಳ ಹಿಂದೆ ಕೆ.ಜಿಗೆ ₹ 80ರಿಂದ ₹ 100 ತಲುಪಿದ್ದ ತೆಂಗಿನ ಕಾಯಿ ದರ ಇಳಿಕೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ ₹40ರಿಂದ ₹50 ದರ ಇದ್ದು ಒಂದು ವಾರದಿಂದ ಸ್ಥಿರವಾಗಿದೆ.</p>.<p>ಬೇಸಗೆಯ ದಗೆ ಹಾಗೂ ನೀರಿನ ಕೊರತೆಯಿಂದ ಹೂವಿನ ಇಳುವರಿ ಕುಸಿದಿರುವುದು ಹಾಗೂ ಮದುವೆ ಮಂಟಪ, ಹೊಸ ಮನೆಗಳ ಅಲಂಕಾರಕ್ಕೆ ಹೂಗಳ ಬಳಕೆ ಹೆಚ್ಚಾಗಿರುವುದರಿಂದ ಹೂವಿಗೆ ಬೇಡಿಕೆ ಸೃಷ್ಟಿಸಿದೆ. ಸಾಮಾನ್ಯವಾಗಿ ಕೆ.ಜಿಗೆ ₹20ರ ಆಸುಪಾಸಿನಲ್ಲಿರುತ್ತಿದ್ದ ಚೆಂಡು ಹೂ ಪ್ರಸ್ತುತ ₹50 ರಿಂದ ₹60ಕ್ಕೆ ಹೆಚ್ಚಾಗಿದೆ.</p>.<p>‘ಸಣ್ಣ ಮಲ್ಲಿಗೆ ₹ 100 ರಿಂದ ₹160, ಮಲ್ಲಿಗೆ ₹300 ರಿಂದ ₹320, ಸೇವಂತಿಗೆ ₹160 ರಿಂದ ₹200, ಸುಗಂಧರಾಜ ₹30 ರಿಂದ ₹40, ಗುಲಾಬಿ ₹160 ರಿಂದ ₹240, ಕನಕಾಂಬರ ₹800 ರಿಂದ ₹1,000 ದರ ಇದೆ’ ಎನ್ನುತ್ತಾರೆ ಚೆನ್ನಾಪುರದ ಮೊಳೆಯ ಹೂವಿನ ವ್ಯಾಪಾರಿ ರವಿ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260512-37-6536495</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ಮಾರುಕಟ್ಟೆಯಲ್ಲಿ ಬೀನ್ಸ್ ದರ ಭಾರಿ ಜಿಗಿತ ಕಂಡಿದ್ದು ದ್ವಿಶತಕದ ಗಡಿ ತಲುಪಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಬೀನ್ಸ್ ಬರೋಬ್ಬರಿ ₹ 180ರಿಂದ 200ರವರೆಗೆ ಮಾರಾಟವಾಗುತ್ತಿದೆ. ಈ ವರ್ಷದಲ್ಲಿ ದಾಖಲಾದ ಅತ್ಯಂತ ಗರಿಷ್ಠ ದರ ಇದಾಗಿದೆ.</p>.<p>ಕಳೆದ ಒಂದು ತಿಂಗಳಿನಿಂದಲೂ ಏರುಗತಿಯಲ್ಲಿದ್ದ ಬೀನ್ಸ್ ₹ 100 ರಿಂದ 120ರ ಆಸುಪಾಸಿನಲ್ಲಿತ್ತು. ಪ್ರಸ್ತುತ ದಿಢೀರ್ ದರ ಹೆಚ್ಚಾಗಿದ್ದು, ಗ್ರಾಹಕರು ಹಾಗೂ ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ.</p>.<p>ದರ ಏರಿಕೆಗೆ ಕಾರಣ: ಅತಿಯಾದ ಬಿಸಿಲು, ಪೂರ್ವ ಮುಂಗಾರು ಮಳೆ ಕೊರತೆ, ಬೀನ್ಸ್ ಬೆಳೆ ಕ್ಷೇತ್ರ ಕುಸಿತ, ರೋಗ ಬಾಧೆ ಸಹಿತ ಹಲವು ಕಾರಣಗಳಿಂದ ಬೀನ್ಸ್ ದರ ಹೆಚ್ಚಳವಾಗಿದೆ. ತೀವ್ರ ಮಳೆ ಕೊರತೆಯಿಂದ ಇಳುವರಿ ಕುಸಿದಿದ್ದು, ಮಾರುಕಟ್ಟೆಯ ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ.</p>.<p>‘ಹೆಚ್ಚು ತರಕಾರಿ ಬೆಳೆಯುವ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಿಂದಲೂ ಪೂರೈಕೆ ಇಳಿಮುಖವಾಗಿರುವುದು’ ಬೆಲೆ ಏರಿಕೆಗೆ ಕಾರಣ ಎನ್ನುತ್ತಾರೆ ವ್ಯಾಪಾರಿಗಳು.</p>.<p>‘ಜಿಲ್ಲೆಯು ಬಹುತೇಕ ಮಳೆಯಾಶ್ರಿತ ಕೃಷಿ ಭೂಮಿ ಹೊಂದಿರುವುದರಿಂದ ಬೇಡಿಕೆಯಷ್ಟು ಬೀನ್ಸ್ ಬೆಳೆಯುವುದಿಲ್ಲ, ಗ್ರೀನ್ ಹೌಸ್, ಹನಿ ನೀರಾವರಿ ಸೌಲಭ್ಯ ಹಾಗೂ ನಾಲೆಗಳ ನೀರು ಲಭ್ಯತೆ ಇರುವ ಕಡೆಗಳಲ್ಲಿ ಮಾತ್ರ ಬೆಳೆಯಲಾಗುತ್ತದೆ. ಈ ವರ್ಷ ಅಂತರ್ಜಲ ತೀವ್ರ ಕುಸಿತವಾಗಿರುವುದು ಹಾಗೂ ಕೊಳವೆ ಬಾವಿಗಳು ಬಹುತೇಕ ಬರಿದಾಗಿರುವುದು ತರಕಾರಿ ಬೆಳೆಯಲು ಹಿನ್ನಡೆಯನ್ನುಂಟು ಮಾಡಿದೆ’ ಎಂಬುದು ರೈತರ ಅಭಿಪ್ರಾಯ.</p>.<p>‘ಮದುವೆ, ಗೃಹ ಪ್ರವೇಶ ಸಹಿತ ಶುಭ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ದರವು ಏರಿಕೆಯಾಗಿದೆ. ಬೇಸಿಗೆಯ ರಜೆ ಇರುವುದರಿಂದ ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರುವುದು ಕೂಡ ತರಕಾರಿ ದರಗಳು ಹೆಚ್ಚಾಗಲು ಕಾರಣವಾಗಿದೆ’ ಎನ್ನುತ್ತಾರೆ ವ್ಯಾಪಾರಿ ಮಧುಸೂದನ್.</p>.<p>‘ಕಳೆದ ವಾರ ಕೆ.ಜಿಗೆ ₹ 60 ದಾಟಿದ್ದ ಟೊಮೆಟೊ ದರ ಅಲ್ಪ ಇಳಿಕೆಯಾಗಿದ್ದು ₹40 ರಿಂದ ₹50ಕ್ಕೆ ಸಿಗುತ್ತಿದೆ, ಮಾರುಕಟ್ಟೆಗೆ ಪೂರೈಕೆ ಹೆಚ್ಚಾಗಿರುವುದು ದರ ಕುಸಿತಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ವ್ಯಾಪಾರಿಗಳು.</p>.<p>ತಿಂಗಳ ಹಿಂದೆ ಕೆ.ಜಿಗೆ ₹ 80ರಿಂದ ₹ 100 ತಲುಪಿದ್ದ ತೆಂಗಿನ ಕಾಯಿ ದರ ಇಳಿಕೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ ₹40ರಿಂದ ₹50 ದರ ಇದ್ದು ಒಂದು ವಾರದಿಂದ ಸ್ಥಿರವಾಗಿದೆ.</p>.<p>ಬೇಸಗೆಯ ದಗೆ ಹಾಗೂ ನೀರಿನ ಕೊರತೆಯಿಂದ ಹೂವಿನ ಇಳುವರಿ ಕುಸಿದಿರುವುದು ಹಾಗೂ ಮದುವೆ ಮಂಟಪ, ಹೊಸ ಮನೆಗಳ ಅಲಂಕಾರಕ್ಕೆ ಹೂಗಳ ಬಳಕೆ ಹೆಚ್ಚಾಗಿರುವುದರಿಂದ ಹೂವಿಗೆ ಬೇಡಿಕೆ ಸೃಷ್ಟಿಸಿದೆ. ಸಾಮಾನ್ಯವಾಗಿ ಕೆ.ಜಿಗೆ ₹20ರ ಆಸುಪಾಸಿನಲ್ಲಿರುತ್ತಿದ್ದ ಚೆಂಡು ಹೂ ಪ್ರಸ್ತುತ ₹50 ರಿಂದ ₹60ಕ್ಕೆ ಹೆಚ್ಚಾಗಿದೆ.</p>.<p>‘ಸಣ್ಣ ಮಲ್ಲಿಗೆ ₹ 100 ರಿಂದ ₹160, ಮಲ್ಲಿಗೆ ₹300 ರಿಂದ ₹320, ಸೇವಂತಿಗೆ ₹160 ರಿಂದ ₹200, ಸುಗಂಧರಾಜ ₹30 ರಿಂದ ₹40, ಗುಲಾಬಿ ₹160 ರಿಂದ ₹240, ಕನಕಾಂಬರ ₹800 ರಿಂದ ₹1,000 ದರ ಇದೆ’ ಎನ್ನುತ್ತಾರೆ ಚೆನ್ನಾಪುರದ ಮೊಳೆಯ ಹೂವಿನ ವ್ಯಾಪಾರಿ ರವಿ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260512-37-6536495</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>