<p>ಚಾಮರಾಜನಗರ: ಸಾರ್ವಜನಿಕ ಸ್ಥಳ, ರಸ್ತೆಗಳ ಬದಿ, ಉದ್ಯಾನ, ಖಾಲಿ ನಿವೇಶನ ಹೀಗೆ ಎಲ್ಲೆಂದರಲ್ಲಿ ಹರಡಿರುವ ಕಸದ ರಾಶಿ, ರಾಜಕಾಲುವೆ, ಚರಂಡಿಯೊಳಗೆ ತುಂಬಿರುವ ತ್ಯಾಜ್ಯ, ಕಾರಂಜಿಯಂತೆ ಚಿಮ್ಮುವ ಮ್ಯಾನ್ಹೋಲ್ಗಳು, ರಸ್ತೆ ಮೇಲೆ ಹರಿಯುವ ಹೊಲಸು... ಜಿಲ್ಲಾಕೇಂದ್ರ ಎನಿಸಿಕೊಂಡಿರುವ ಚಾಮರಾಜನಗರದೊಳಗೆ ಅಡ್ಡಾಡಿದರೆ ಕಾಣುವ ಚಿತ್ರಣ ಇದು.</p>.<p>ಇನ್ನೇನು ಪೂರ್ವ ಮುಂಗಾರು ಆರಂಭವಾಗುವ ಮುನ್ಸೂಚನೆ ಸಿಕ್ಕರೂ ನಗರಸಭೆ ನಿದ್ದೆಯಿಂದ ಎದ್ದಂತೆ ಕಾಣುತ್ತಿಲ್ಲ. ನಗರದಲ್ಲಿ ಹಾದು ಹೋಗಿರುವ ಚರಂಡಿಗಳು,ರಾಜಕಾಲುವೆಗಳು ತ್ಯಾಜ್ಯಗಳಿಂದ ಕಟ್ಟಿಕೊಂಡಿದ್ದು ಮಳೆಗಾಲದಲ್ಲಿ ಅವಾಂತರ ತಂದೊಡ್ಡಲಿದೆ. ವಾರದ ಹಿಂದಷ್ಟೆ ಸುರಿದ ಸಣ್ಣ ಮಳೆ ಎಚ್ಚರಿಕೆಯ ಕರೆಗಂಟೆ ಬಾರಿಸಿದೆ.</p>.<p>ಅರ್ಧತಾಸು ಸುರಿದ ಮಳೆಗೆ ನಗರಸಭೆಯ ಪಕ್ಕದಲ್ಲಿರುವ ಅಂಗಡಿ ಬೀದಿಯ ಚರಂಡಿ ತುಂಬಿ ಹೊಲಸು ರಸ್ತೆಗೆ ಹರಿದು ಇಡೀ ಪರಿಸರ ಗಬ್ಬೆದ್ದು ನಾರುವಂತಾಯಿತು. ಪ್ಲಾಸ್ಟಿಕ್ ಕವರ್ಗಳು, ಹರಿದ ಚಪ್ಪಲಿ, ಬಟ್ಟೆ, ತರಕಾರಿ ತ್ಯಾಜ್ಯದ ರಾಶಿ ರಸ್ತೆಯ ಮೇಲೆ ಹರಡಿ ಜನರ ಸಂಚಾರಕ್ಕೆ ಅಡ್ಡಿಯಾಯಿತು.</p>.<p>ನಗರದ ಬಹುತೇಕ ವಾರ್ಡ್ಗಳಲ್ಲಿ ಚರಂಡಿ, ರಾಜಕಾಲುವೆಗಳನ್ನು ನಗರಸಭೆ ಸ್ವಚ್ಛಗೊಳಿಸಿಲ್ಲ. ಮುರಿದು ಹೋಗಿರುವ ಮ್ಯಾನ್ಹೋಲ್ಗಳನ್ನೂ ದುರಸ್ತಿಗೊಳಿಸಿಲ್ಲ. ನಗರದ ಕುಲುಮೆ ರಸ್ತೆಯಲ್ಲಿರುವ ಇಮ್ಯಾನುವೆಲ್ ಪಬ್ಲಿಕ್ ಶಾಲೆ ಎದುರುಗಿರುವ ಮ್ಯಾನ್ಹೋಲ್ ಕೆಟ್ಟು ತಿಂಗಳು ಕಳೆದರೂ ರಿಪೇರಿಯಾಗಿಲ್ಲ.</p>.<p>ಪರಿಣಾಮ ಬಡಾವಣೆಯಲ್ಲಿ ಉತ್ಪತ್ತಿಯಾಗುವ ಮಲಮೂತ್ರ ಸಹಿತ ದ್ರವ ತ್ಯಾಜ್ಯ ಮ್ಯಾನ್ಹೋಲ್ನಿಂದ ಹೊರಬಂದು ರಸ್ತೆಗೆ ಹರಿಯುತ್ತಿದೆ. ಇಡೀ ಪರಿಸರ ಗಬ್ಬೆದ್ದು ನಾರುತ್ತಿದ್ದು ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಈ ಬಗ್ಗೆ ನಗರಸಭೆ ಪೌರಾಯುಕ್ತರಿಗೆ ಖುದ್ದು ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ ಎಂದು ಸ್ಥಳೀಯರಾದ ರಾಜಶೇಖರ್ ದೂರುತ್ತಾರೆ.</p>.<p>ಇದೇ ಕುಲುಮೆ ರಸ್ತೆಯಲ್ಲಿರುವ ದೋಸೆ ಹೋಟೆಲ್ ಎದುರು ಮ್ಯಾನ್ಹೋಲ್ ಮುಚ್ಚಳ ಮುರಿದು ವಾರ ಕಳೆದರೂ ಬದಲಾಯಿಸಿಲ್ಲ. ಗುಂಡಿಯ ಸುತ್ತಲೂ ದೊಡ್ಡ ಕಲ್ಲುಗಳನ್ನು ಇರಿಸಲಾಗಿದ್ದು ರಾತ್ರಿಯ ಹೊತ್ತು ರಸ್ತೆ ಕಾಣದೆ ವಾಹನಗಳು ಗುಂಡಿಗೆ ಇಳಿಸಿ ಅಪಘಾತಕ್ಕೀಡಾಗುತ್ತಿವೆ.</p>.<p>ರಾಮಸಮುದ್ರ ವಾರ್ಡ್ನಲ್ಲಿ ಪೌರ ಕಾರ್ಮಿಕರು ನಿಯಮಿತವಾಗಿ ಕಸ ಸಂಗ್ರಹಿಸಲು ಬಾರದೆ ಸ್ಥಳೀಯರು ಅನಿವಾರ್ಯವಾಗಿ ಪ್ರತಿನಿತ್ಯ ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಪ್ಲಾಸ್ಟಿಕ್ ಕವರ್ಗಳನ್ನು ಕುಲುಮೆ ರಸ್ತೆಯ ಬದಿ ತಂದು ಬಿಸಾಡುತ್ತಿದ್ದಾರೆ. ಪರಿಣಾಮ ಈ ಜಾಗ ತ್ಯಾಜ್ಯ ವಿಲೇವಾರಿಯ ತಾಣವಾಗಿ ಬದಲಾಗಿದ್ದು ದುರ್ವಾಸನೆಯಿಂದ ಕೂಡಿದೆ.</p>.<p>ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಪ್ರಗತಿನಗರ, ಮಹಾವೀರ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಲುವೆ ತ್ಯಾಜ್ಯಗಳಿಂದ ತುಂಬಿದೆ. ಮಳೆ ಬಿದ್ದರೆ ಚರಂಡಿಯ ಕಸ ಸರಾಗವಾಗಿ ಹರಿಯಲು ವ್ಯವಸ್ಥೆ ಇಲ್ಲದೆ ಇಡೀ ಪರಿಸರ ಕೆರೆಯಂತಾಗಿ ಅಸಹನೀಯ ವಾತಾವರಣ ನಿರ್ಮಾಣವಾಗುತ್ತದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-37-559191566</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಾಮರಾಜನಗರ: ಸಾರ್ವಜನಿಕ ಸ್ಥಳ, ರಸ್ತೆಗಳ ಬದಿ, ಉದ್ಯಾನ, ಖಾಲಿ ನಿವೇಶನ ಹೀಗೆ ಎಲ್ಲೆಂದರಲ್ಲಿ ಹರಡಿರುವ ಕಸದ ರಾಶಿ, ರಾಜಕಾಲುವೆ, ಚರಂಡಿಯೊಳಗೆ ತುಂಬಿರುವ ತ್ಯಾಜ್ಯ, ಕಾರಂಜಿಯಂತೆ ಚಿಮ್ಮುವ ಮ್ಯಾನ್ಹೋಲ್ಗಳು, ರಸ್ತೆ ಮೇಲೆ ಹರಿಯುವ ಹೊಲಸು... ಜಿಲ್ಲಾಕೇಂದ್ರ ಎನಿಸಿಕೊಂಡಿರುವ ಚಾಮರಾಜನಗರದೊಳಗೆ ಅಡ್ಡಾಡಿದರೆ ಕಾಣುವ ಚಿತ್ರಣ ಇದು.</p>.<p>ಇನ್ನೇನು ಪೂರ್ವ ಮುಂಗಾರು ಆರಂಭವಾಗುವ ಮುನ್ಸೂಚನೆ ಸಿಕ್ಕರೂ ನಗರಸಭೆ ನಿದ್ದೆಯಿಂದ ಎದ್ದಂತೆ ಕಾಣುತ್ತಿಲ್ಲ. ನಗರದಲ್ಲಿ ಹಾದು ಹೋಗಿರುವ ಚರಂಡಿಗಳು,ರಾಜಕಾಲುವೆಗಳು ತ್ಯಾಜ್ಯಗಳಿಂದ ಕಟ್ಟಿಕೊಂಡಿದ್ದು ಮಳೆಗಾಲದಲ್ಲಿ ಅವಾಂತರ ತಂದೊಡ್ಡಲಿದೆ. ವಾರದ ಹಿಂದಷ್ಟೆ ಸುರಿದ ಸಣ್ಣ ಮಳೆ ಎಚ್ಚರಿಕೆಯ ಕರೆಗಂಟೆ ಬಾರಿಸಿದೆ.</p>.<p>ಅರ್ಧತಾಸು ಸುರಿದ ಮಳೆಗೆ ನಗರಸಭೆಯ ಪಕ್ಕದಲ್ಲಿರುವ ಅಂಗಡಿ ಬೀದಿಯ ಚರಂಡಿ ತುಂಬಿ ಹೊಲಸು ರಸ್ತೆಗೆ ಹರಿದು ಇಡೀ ಪರಿಸರ ಗಬ್ಬೆದ್ದು ನಾರುವಂತಾಯಿತು. ಪ್ಲಾಸ್ಟಿಕ್ ಕವರ್ಗಳು, ಹರಿದ ಚಪ್ಪಲಿ, ಬಟ್ಟೆ, ತರಕಾರಿ ತ್ಯಾಜ್ಯದ ರಾಶಿ ರಸ್ತೆಯ ಮೇಲೆ ಹರಡಿ ಜನರ ಸಂಚಾರಕ್ಕೆ ಅಡ್ಡಿಯಾಯಿತು.</p>.<p>ನಗರದ ಬಹುತೇಕ ವಾರ್ಡ್ಗಳಲ್ಲಿ ಚರಂಡಿ, ರಾಜಕಾಲುವೆಗಳನ್ನು ನಗರಸಭೆ ಸ್ವಚ್ಛಗೊಳಿಸಿಲ್ಲ. ಮುರಿದು ಹೋಗಿರುವ ಮ್ಯಾನ್ಹೋಲ್ಗಳನ್ನೂ ದುರಸ್ತಿಗೊಳಿಸಿಲ್ಲ. ನಗರದ ಕುಲುಮೆ ರಸ್ತೆಯಲ್ಲಿರುವ ಇಮ್ಯಾನುವೆಲ್ ಪಬ್ಲಿಕ್ ಶಾಲೆ ಎದುರುಗಿರುವ ಮ್ಯಾನ್ಹೋಲ್ ಕೆಟ್ಟು ತಿಂಗಳು ಕಳೆದರೂ ರಿಪೇರಿಯಾಗಿಲ್ಲ.</p>.<p>ಪರಿಣಾಮ ಬಡಾವಣೆಯಲ್ಲಿ ಉತ್ಪತ್ತಿಯಾಗುವ ಮಲಮೂತ್ರ ಸಹಿತ ದ್ರವ ತ್ಯಾಜ್ಯ ಮ್ಯಾನ್ಹೋಲ್ನಿಂದ ಹೊರಬಂದು ರಸ್ತೆಗೆ ಹರಿಯುತ್ತಿದೆ. ಇಡೀ ಪರಿಸರ ಗಬ್ಬೆದ್ದು ನಾರುತ್ತಿದ್ದು ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಈ ಬಗ್ಗೆ ನಗರಸಭೆ ಪೌರಾಯುಕ್ತರಿಗೆ ಖುದ್ದು ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ ಎಂದು ಸ್ಥಳೀಯರಾದ ರಾಜಶೇಖರ್ ದೂರುತ್ತಾರೆ.</p>.<p>ಇದೇ ಕುಲುಮೆ ರಸ್ತೆಯಲ್ಲಿರುವ ದೋಸೆ ಹೋಟೆಲ್ ಎದುರು ಮ್ಯಾನ್ಹೋಲ್ ಮುಚ್ಚಳ ಮುರಿದು ವಾರ ಕಳೆದರೂ ಬದಲಾಯಿಸಿಲ್ಲ. ಗುಂಡಿಯ ಸುತ್ತಲೂ ದೊಡ್ಡ ಕಲ್ಲುಗಳನ್ನು ಇರಿಸಲಾಗಿದ್ದು ರಾತ್ರಿಯ ಹೊತ್ತು ರಸ್ತೆ ಕಾಣದೆ ವಾಹನಗಳು ಗುಂಡಿಗೆ ಇಳಿಸಿ ಅಪಘಾತಕ್ಕೀಡಾಗುತ್ತಿವೆ.</p>.<p>ರಾಮಸಮುದ್ರ ವಾರ್ಡ್ನಲ್ಲಿ ಪೌರ ಕಾರ್ಮಿಕರು ನಿಯಮಿತವಾಗಿ ಕಸ ಸಂಗ್ರಹಿಸಲು ಬಾರದೆ ಸ್ಥಳೀಯರು ಅನಿವಾರ್ಯವಾಗಿ ಪ್ರತಿನಿತ್ಯ ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಪ್ಲಾಸ್ಟಿಕ್ ಕವರ್ಗಳನ್ನು ಕುಲುಮೆ ರಸ್ತೆಯ ಬದಿ ತಂದು ಬಿಸಾಡುತ್ತಿದ್ದಾರೆ. ಪರಿಣಾಮ ಈ ಜಾಗ ತ್ಯಾಜ್ಯ ವಿಲೇವಾರಿಯ ತಾಣವಾಗಿ ಬದಲಾಗಿದ್ದು ದುರ್ವಾಸನೆಯಿಂದ ಕೂಡಿದೆ.</p>.<p>ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಪ್ರಗತಿನಗರ, ಮಹಾವೀರ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಲುವೆ ತ್ಯಾಜ್ಯಗಳಿಂದ ತುಂಬಿದೆ. ಮಳೆ ಬಿದ್ದರೆ ಚರಂಡಿಯ ಕಸ ಸರಾಗವಾಗಿ ಹರಿಯಲು ವ್ಯವಸ್ಥೆ ಇಲ್ಲದೆ ಇಡೀ ಪರಿಸರ ಕೆರೆಯಂತಾಗಿ ಅಸಹನೀಯ ವಾತಾವರಣ ನಿರ್ಮಾಣವಾಗುತ್ತದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-37-559191566</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>