‘ಟ್ಯಾಂಕರ್ ನೀರು ಪೂರೈಕೆ’
ಮಲೆ ಮಹದೇಶ್ವರ ವನ್ಯಜೀವಿ ವಲದಯಲ್ಲಿ ಹರಿಯುವ ಪಾಲಾರ್ ಹಳ್ಳ ಬತ್ತಿದ್ದು ಅಲ್ಲಲ್ಲಿ ಗುಂಡಿ ಗಳಲ್ಲಿ ಸಂಗ್ರಹವಾಗಿರುವ ನೀರನ್ನು ಪ್ರಾಣಿಗಳು ಕುಡಿಯುತ್ತಿವೆ. ನಿಂತ ನೀರಾಗಿರುವ ಕಾರಣ ಕುಡಿಯಲು ಯೋಗ್ಯವಾಗಿದೆಯೇ ಎಂದು 15 ದಿನಗಳಿಗೊಮ್ಮೆ ಪರೀಕ್ಷೆ ನಡೆಸಲಾಗುತ್ತಿದೆ. ಕಾವೇರಿ ಹಾಗೂ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ 15 ಕಡೆಗಳಲ್ಲಿ ನೀರಿನ ಕಟ್ಟೆಗಳನ್ನು ಕಟ್ಟಲಾಗಿದ್ದು ಟ್ಯಾಂಕರ್ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಹೂಗ್ಯಂ, ಉಡುತೊರೆ, ದೊಡ್ಡಹಳ್ಳ, ದೇವರಮಡು ಹಳ್ಳದಲ್ಲಿ ನೀರಿದ್ದು ಸಧ್ಯಕ್ಕೆ ಪರಿಸ್ಥಿತಿ ಗಂಭೀರವಾಗಿಲ್ಲ ಎಂದು ಮಲೆ ಮಹದೇಶ್ವರ ವನ್ಯಜೀವಿ ಧಾಮ ಡಿಸಿಎಫ್ ಭಾಸ್ಕರ್ ತಿಳಿಸಿದ್ದಾರೆ.