<p><strong>ಚಾಮರಾಜನಗರ:</strong> ಕೆಲವು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿರುವ ಪರಿಣಾಮ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಅಲ್ಪ ಇಳಿಕೆ ಕಂಡಿದೆ.</p>.<p>ಬೀನ್ಸ್ ಇಳಿಕೆ: ವಾರದ ಹಿಂದೆ ಬರೋಬ್ಬರಿ ದ್ವಿಶತಕದ (₹ 200) ಗಡಿ ತಲುಪಿ ಗ್ರಾಹಕರ ಜೇಬಿಗೆ ಬಾರವಾಗಿದ್ದ ಬೀನ್ಸ್ ಬೆಲೆ ಇಳಿಕೆಯಾಗಿದ್ದು ಕೆ.ಜಿಗೆ ₹100 ರಿಂದ ₹120ರವರೆಗೆ ಮಾರಾಟವಾಗುತ್ತಿದೆ. ಹೊರ ಜಿಲ್ಲೆಗಳಿಂದ ಆವಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೀನ್ಸ್ ದರ ಇಳಿಕೆಯಾಗಿದೆ. ಉತ್ತಮ ಮಳೆ ಬಿದ್ದರೆ ದರ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.</p>.<p>ನುಗ್ಗೆ ಅಗ್ಗ: ಮದುವೆ, ಗೃಹ ಪ್ರವೇಶ ಸಹಿತ ಸಮಾರಂಭಗಳಲ್ಲಿ ಸಾಂಬಾರ್ ತಯಾರಿಕೆಗೆ ಹಾಗೂ ಮನೆಯ ಬಳಕೆಗೆ ಹೆಚ್ಚು ಬೇಡಿಕೆ ಇರುವ ನುಗ್ಗೆಕಾಯಿ ದರವೂ ಇಳಿಕೆಯಾಗಿದೆ. ಕೆಲವು ತಿಂಗಳ ಹಿಂದೆ ₹ 400ರ ಗಡಿ ದಾಟಿದ್ದ ನುಗ್ಗೆ ಪ್ರಸ್ತುತ ಕೆ.ಜಿಗೆ ₹50 ರಿಂದ ₹60ಕ್ಕೆ ಮಾರಾಟವಾಗುತ್ತಿದೆ.</p>.<p>ಹವಾಮಾನ ವೈಪರೀತ್ಯ, ಇಳುವರಿ ಕುಸಿತ, ರೋಗ ಬಾಧೆ ಹಾಗೂ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ನುಗ್ಗೆ ದರ ಗಗನಕ್ಕೇರಿತ್ತು. ಇದೀಗ ಮಾರುಕಟ್ಟೆಗೆ ಭರಪೂರ ನುಗ್ಗೆ ಆಗಮನ ಆಗುತ್ತಿರುವುದರಿಂದ ಬೆಲೆ ಕುಸಿತವಾಗಿದೆ ಎನ್ನುತ್ತಾರೆ ವ್ಯಾಪಾರಿ ಶ್ರೀನಿವಾಸ್.</p>.<p>ಟೊಮೆಟೊ ಸ್ಥಿರ: ಮಾರುಕಟ್ಟೆಯಲ್ಲಿ ಟೊಮೆಟೊ ದರ ಸ್ಥಿರವಾಗಿದೆ. ಗುಣಮಟ್ಟ ಹಾಗೂ ಗಾತ್ರದ ಆಧಾರದ ಮೇಲೆ ದರ ನಿಗದಿಯಾಗಿದ್ದು ಕೆ.ಜಿಗೆ ₹40 ರಿಂದ ₹50ರವರೆಗೆ ಬೆಲೆ ಇದೆ. ಉತ್ತಮ ಮಳೆ ಸುರಿಯುತ್ತಿರುವುದು, ಟೊಮೆಟೊ ಆವಕ ಹೆಚ್ಚಾಗಿರುವುದರಿಂದ ಬೆಲೆ ಸ್ಥಿರವಾಗಿದೆ. ಹೆಚ್ಚು ಬಳಕೆಯಾಗುವ ಈರುಳ್ಳಿ ದರವೂ ಒಂದೆರಡು ತಿಂಗಳುಗಳಿಂದ ಸ್ಥಿರವಾಗಿದೆ. ಗುಣಮಟ್ಟ ಗಾತ್ರದ ಆಧಾರದ ಮೇಲೆ ಕೆ.ಜಿಗೆ ₹20 ರಿಂದ ₹25ರವರೆಗೆ ಇದೆ.</p>.<p>ಮಾವಿನ ದರವೂ ಇಳಿಕೆ: ಸೀಸನ್ ಆರಂಭದಲ್ಲಿ ದುಬಾರಿಯಾಗಿದ್ದ ಮಾವು ಕೈಗೆಟುಕುವ ದರದಲ್ಲಿ ಸಿಗುತ್ತಿದೆ. ಬಾದಾಮಿ, ಮಲ್ಲಿಕಾ, ಮಲಗೋವ ತಲಾ ಕೆ.ಜಿಗೆ ₹80 ರಿಂದ ₹100, ಸೆಂಧೂರ, ತೋತಾಪುರಿ ತಲಾ ₹ 50ಕ್ಕೆ ಸಿಗುತ್ತಿದೆ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಭರಪೂರ ಮಾವು ಮಾರುಕಟ್ಟೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ದರ ಇಳಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿ ಮಹೇಶ್.</p>.<p>ನಿಂಬೆ ಬೆಲೆ ಕುಸಿತ: ಬೇಸಿಗೆಯಲ್ಲಿ ಭಾರಿ ಬೇಡಿಕೆಯ ಪರಿಣಾಮ ಗಗನಕ್ಕೇರಿದ್ದ ನಿಂಬೆ ಬೆಲೆ ಮಳೆ ಬೀಳುತ್ತಿದ್ದಂತೆ ಇಳಿಕೆಯಾಗಿದೆ. ₹15 ದಿನಗಳ ಹಿಂದೆ ಒಂದು ನಿಂಬೆಗೆ ₹10 ರಿಂದ ₹12 ದರ ಇತ್ತು. ಪ್ರಸ್ತುತ ₹10ಕ್ಕೆ ಎರಡು ನಿಂಬೆ ಸಿಗುತ್ತಿದೆ.</p>.<p>ಹೂವಿನ ದರ ಇಳಿಕೆ: ಅಧಿಕ ಮಾಸದ ಪರಿಣಾಮ ಹೂವಿನ ದರ ಇಳಿಕೆಯಾಗಿದೆ. ಮದುವೆ, ದೇವರ ಅಲಂಕಾರ ಸಹಿತ ರಾಜಕೀಯ, ಧಾರ್ಮಿಕ ಸಮಾರಂಭಗಳಲ್ಲಿ ಹೂವಿನ ಮಾಲೆಗಳ ತಯಾರಿಕೆಯಲ್ಲಿ ಹೆಚ್ಚು ಬಳಕೆಯಾಗುವ ಸುಗಂಧರಾಜ ಬೆಲೆ ಪಾತಾಳಕ್ಕೆ ಕುಸಿದಿದೆ. ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 20ಕ್ಕೆ ಇಳಿಕೆಯಾಗಿದ್ದು ಹೂ ಬೆಳೆಗಾರರಿಗೆ ಆರ್ಥಿಕ ಪೆಟ್ಟು ನೀಡಿದೆ ಎನ್ನುತ್ತಾರೆ ಚೆನ್ನಾಪುರದ ಮೋಳೆಯಲ್ಲಿ ಹೂವಿನ ವ್ಯಾಪಾರ ಮಾಡುವ ರವಿ.</p>.<p>ಶುಭ ಸಮಾರಂಭಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಇತರೆ ಹೂಗಳ ಬೆಲೆಯೂ ಅಲ್ಪ ಇಳಿಕೆಯಾಗಿದೆ. ಸಣ್ಣ ಮಲ್ಲಿಗೆ ಕೆ.ಜಿಗೆ ₹200, ಮಲ್ಲಿಗೆ ₹400, ಕನಕಾಂಬರ ₹800, ಚೆಂಡು ಹೂ ₹40ರಿಂದ₹50, ಸೇವಂತಿಗೆ 200, ಗುಲಾಬಿ ₹ 100–₹120 ದರ ಇದೆ ಎನ್ನುತ್ತಾರೆ ಅವರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260527-37-848402452</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ:</strong> ಕೆಲವು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿರುವ ಪರಿಣಾಮ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಅಲ್ಪ ಇಳಿಕೆ ಕಂಡಿದೆ.</p>.<p>ಬೀನ್ಸ್ ಇಳಿಕೆ: ವಾರದ ಹಿಂದೆ ಬರೋಬ್ಬರಿ ದ್ವಿಶತಕದ (₹ 200) ಗಡಿ ತಲುಪಿ ಗ್ರಾಹಕರ ಜೇಬಿಗೆ ಬಾರವಾಗಿದ್ದ ಬೀನ್ಸ್ ಬೆಲೆ ಇಳಿಕೆಯಾಗಿದ್ದು ಕೆ.ಜಿಗೆ ₹100 ರಿಂದ ₹120ರವರೆಗೆ ಮಾರಾಟವಾಗುತ್ತಿದೆ. ಹೊರ ಜಿಲ್ಲೆಗಳಿಂದ ಆವಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೀನ್ಸ್ ದರ ಇಳಿಕೆಯಾಗಿದೆ. ಉತ್ತಮ ಮಳೆ ಬಿದ್ದರೆ ದರ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.</p>.<p>ನುಗ್ಗೆ ಅಗ್ಗ: ಮದುವೆ, ಗೃಹ ಪ್ರವೇಶ ಸಹಿತ ಸಮಾರಂಭಗಳಲ್ಲಿ ಸಾಂಬಾರ್ ತಯಾರಿಕೆಗೆ ಹಾಗೂ ಮನೆಯ ಬಳಕೆಗೆ ಹೆಚ್ಚು ಬೇಡಿಕೆ ಇರುವ ನುಗ್ಗೆಕಾಯಿ ದರವೂ ಇಳಿಕೆಯಾಗಿದೆ. ಕೆಲವು ತಿಂಗಳ ಹಿಂದೆ ₹ 400ರ ಗಡಿ ದಾಟಿದ್ದ ನುಗ್ಗೆ ಪ್ರಸ್ತುತ ಕೆ.ಜಿಗೆ ₹50 ರಿಂದ ₹60ಕ್ಕೆ ಮಾರಾಟವಾಗುತ್ತಿದೆ.</p>.<p>ಹವಾಮಾನ ವೈಪರೀತ್ಯ, ಇಳುವರಿ ಕುಸಿತ, ರೋಗ ಬಾಧೆ ಹಾಗೂ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ನುಗ್ಗೆ ದರ ಗಗನಕ್ಕೇರಿತ್ತು. ಇದೀಗ ಮಾರುಕಟ್ಟೆಗೆ ಭರಪೂರ ನುಗ್ಗೆ ಆಗಮನ ಆಗುತ್ತಿರುವುದರಿಂದ ಬೆಲೆ ಕುಸಿತವಾಗಿದೆ ಎನ್ನುತ್ತಾರೆ ವ್ಯಾಪಾರಿ ಶ್ರೀನಿವಾಸ್.</p>.<p>ಟೊಮೆಟೊ ಸ್ಥಿರ: ಮಾರುಕಟ್ಟೆಯಲ್ಲಿ ಟೊಮೆಟೊ ದರ ಸ್ಥಿರವಾಗಿದೆ. ಗುಣಮಟ್ಟ ಹಾಗೂ ಗಾತ್ರದ ಆಧಾರದ ಮೇಲೆ ದರ ನಿಗದಿಯಾಗಿದ್ದು ಕೆ.ಜಿಗೆ ₹40 ರಿಂದ ₹50ರವರೆಗೆ ಬೆಲೆ ಇದೆ. ಉತ್ತಮ ಮಳೆ ಸುರಿಯುತ್ತಿರುವುದು, ಟೊಮೆಟೊ ಆವಕ ಹೆಚ್ಚಾಗಿರುವುದರಿಂದ ಬೆಲೆ ಸ್ಥಿರವಾಗಿದೆ. ಹೆಚ್ಚು ಬಳಕೆಯಾಗುವ ಈರುಳ್ಳಿ ದರವೂ ಒಂದೆರಡು ತಿಂಗಳುಗಳಿಂದ ಸ್ಥಿರವಾಗಿದೆ. ಗುಣಮಟ್ಟ ಗಾತ್ರದ ಆಧಾರದ ಮೇಲೆ ಕೆ.ಜಿಗೆ ₹20 ರಿಂದ ₹25ರವರೆಗೆ ಇದೆ.</p>.<p>ಮಾವಿನ ದರವೂ ಇಳಿಕೆ: ಸೀಸನ್ ಆರಂಭದಲ್ಲಿ ದುಬಾರಿಯಾಗಿದ್ದ ಮಾವು ಕೈಗೆಟುಕುವ ದರದಲ್ಲಿ ಸಿಗುತ್ತಿದೆ. ಬಾದಾಮಿ, ಮಲ್ಲಿಕಾ, ಮಲಗೋವ ತಲಾ ಕೆ.ಜಿಗೆ ₹80 ರಿಂದ ₹100, ಸೆಂಧೂರ, ತೋತಾಪುರಿ ತಲಾ ₹ 50ಕ್ಕೆ ಸಿಗುತ್ತಿದೆ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಭರಪೂರ ಮಾವು ಮಾರುಕಟ್ಟೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ದರ ಇಳಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿ ಮಹೇಶ್.</p>.<p>ನಿಂಬೆ ಬೆಲೆ ಕುಸಿತ: ಬೇಸಿಗೆಯಲ್ಲಿ ಭಾರಿ ಬೇಡಿಕೆಯ ಪರಿಣಾಮ ಗಗನಕ್ಕೇರಿದ್ದ ನಿಂಬೆ ಬೆಲೆ ಮಳೆ ಬೀಳುತ್ತಿದ್ದಂತೆ ಇಳಿಕೆಯಾಗಿದೆ. ₹15 ದಿನಗಳ ಹಿಂದೆ ಒಂದು ನಿಂಬೆಗೆ ₹10 ರಿಂದ ₹12 ದರ ಇತ್ತು. ಪ್ರಸ್ತುತ ₹10ಕ್ಕೆ ಎರಡು ನಿಂಬೆ ಸಿಗುತ್ತಿದೆ.</p>.<p>ಹೂವಿನ ದರ ಇಳಿಕೆ: ಅಧಿಕ ಮಾಸದ ಪರಿಣಾಮ ಹೂವಿನ ದರ ಇಳಿಕೆಯಾಗಿದೆ. ಮದುವೆ, ದೇವರ ಅಲಂಕಾರ ಸಹಿತ ರಾಜಕೀಯ, ಧಾರ್ಮಿಕ ಸಮಾರಂಭಗಳಲ್ಲಿ ಹೂವಿನ ಮಾಲೆಗಳ ತಯಾರಿಕೆಯಲ್ಲಿ ಹೆಚ್ಚು ಬಳಕೆಯಾಗುವ ಸುಗಂಧರಾಜ ಬೆಲೆ ಪಾತಾಳಕ್ಕೆ ಕುಸಿದಿದೆ. ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 20ಕ್ಕೆ ಇಳಿಕೆಯಾಗಿದ್ದು ಹೂ ಬೆಳೆಗಾರರಿಗೆ ಆರ್ಥಿಕ ಪೆಟ್ಟು ನೀಡಿದೆ ಎನ್ನುತ್ತಾರೆ ಚೆನ್ನಾಪುರದ ಮೋಳೆಯಲ್ಲಿ ಹೂವಿನ ವ್ಯಾಪಾರ ಮಾಡುವ ರವಿ.</p>.<p>ಶುಭ ಸಮಾರಂಭಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಇತರೆ ಹೂಗಳ ಬೆಲೆಯೂ ಅಲ್ಪ ಇಳಿಕೆಯಾಗಿದೆ. ಸಣ್ಣ ಮಲ್ಲಿಗೆ ಕೆ.ಜಿಗೆ ₹200, ಮಲ್ಲಿಗೆ ₹400, ಕನಕಾಂಬರ ₹800, ಚೆಂಡು ಹೂ ₹40ರಿಂದ₹50, ಸೇವಂತಿಗೆ 200, ಗುಲಾಬಿ ₹ 100–₹120 ದರ ಇದೆ ಎನ್ನುತ್ತಾರೆ ಅವರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260527-37-848402452</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>