<p><strong>ಚಾಮರಾಜನಗರ:</strong> ನಗರದ ಖಾಲಿ ನಿವೇಶನಗಳಲ್ಲಿ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಹುಲುಸಾಗಿ ಬೆಳೆದಿರುವ ಜಾಲಿ ಗಿಡಗಳು (ಮುಳ್ಳಿನ ಗಿಡ) ಪಾದಚಾರಿಗಳ ಹಾಗೂ ವಾಹನ ಸವಾರರ ಪಾಲಿಗೆ ಕಂಟಕವಾಗಿ ಪರಿಣಮಿಸಿವೆ.</p>.<p>ನಡೆದಾಡುವಾಗ, ವಾಹನಗಳಲ್ಲಿ ಸಂಚರಿಸುವಾಗ ರಸ್ತೆಯ ಬದಿ ಹಾಗೂ ತಿರುವುಗಳಲ್ಲಿ ಏಕಾಏಕಿ ಎದುರಾಗುತ್ತಿರುವ ಜಾಲಿ ಮುಳ್ಳು ಚುಚ್ಚಿಸಿಕೊಂಡು ನಾಗರಿಕರು ಗಾಯಗೊಳ್ಳುತ್ತಿದ್ದಾರೆ. ಇಷ್ಟಾದರೂ ರಸ್ತೆಗೆ ಹಬ್ಬಿರುವ ಜಾಲಿ ಮುಳ್ಳನ್ನು ಕಡಿದು ಹಾಕಲು ನಗರಸಭೆಯಾಗಲಿ, ನಿವೇಶನಗಳ ಮಾಲೀಕರಾಗಲಿ ಮುಂದಾಗದಿರುವುದು ಸಾರ್ವನಿಕರ ಅಸಮಾಧಾನಕ್ಕೆ ಕಾರಣವಾಗಿದೆ.</p>.<p>ಬಿ.ರಾಚಯ್ಯ ಜೋಡಿ ರಸ್ತೆಯಿಂದ ರಾಮಸಮುದ್ರ ಬಡಾವಣೆಗೆ ಸಂಪರ್ಕ ಕಲ್ಪಿಸುವ ಕುಲುಮೆ ರಸ್ತೆಯ ಇಕ್ಕೆಲಗಳಲ್ಲಿ ಜಾಲಿ ಮುಳ್ಳಿನ ಗಿಡಗಳು ಬೆಳೆದಿದ್ದು ರಸ್ತೆಯ ಕಾಲು ಭಾಗ ಜಾಗವನ್ನು ಆವರಿಸಿಕೊಂಡಿದೆ. ಈ ರಸ್ತೆಯಲ್ಲಿ ಸಾಗುವಾಗ ನಾಗರಿಕರು ಸ್ವಲ್ಪ ಎಚ್ಚರ ತಪ್ಪಿದರೂ ಕಣ್ಣುಗಳಿಗೆ ಸಂಚಕಾರ ಖಚಿತ.</p>.<p>ಜಿಲ್ಲಾ ಬಿಜೆಪಿ ಕಚೇರಿಯಿಂದ ಚೆನ್ನಾಪುರದ ಮೋಳೆಯವರೆಗೂ ಚಾಚಿಕೊಂಡಿರುವ ರಸ್ತೆಯ ಹಲವು ಕಡೆಗಳಲ್ಲಿ ಮುಳ್ಳಿನ ಗಿಡಗಳು ರಸ್ತೆಗೆ ಬಾಗಿದ್ದು ಸಂಚರಿಸುವುದು ದುಸ್ತರವಾಗಿದೆ. ಹಲವು ಬಾರಿ ವಾಹನ ಸವಾರರ ಮುಖಕ್ಕೆ ಮುಳ್ಳುಗಳು ಬಡಿದು ಗಂಭೀರವಾದ ಗಾಯಗಳಾಗಿವೆ. ಸೈಕಲ್ ಚಲಾಯಿಸುವಾಗ ಮಕ್ಕಳ ಮುಖಕ್ಕೂ ಮುಳ್ಳುಗಳು ಬಡಿದು ಅನಾಹುತಗಳಾಗಿವೆ. ರಾತ್ರಿಯ ಹೊತ್ತು ಬೀದಿದೀಪಗಳು ಇಲ್ಲದ ಕಡೆಗಳಲ್ಲಿ ಬೈಕ್ ಸವಾರರ ಮುಖಕ್ಕೆ ಮುಳ್ಳು ಬಡಿದು ಅಪಘಾತಕ್ಕೆ ತುತ್ತಾಗಿದ್ದಾರೆ. ಮೈಕೈ ತರಚಿಕೊಂಡು ಗಾಯಗೊಂಡಿದ್ದಾರೆ. ರಸ್ತೆ ಬದಿ ಹಾಗೂ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಜಾಲಿ ಗಿಡಗಳು ದೈತ್ಯ ಮರಗಳಾಗಿ ರಸ್ತೆಗೆ ಚಾಚಿಕೊಂಡಿದ್ದು ಕತ್ತರಿಸುವ ಗೋಜಿಗೆ ಯಾರೂ ಮುಂದಾಗಿಲ್ಲ.</p>.<p>ಕೆಲವೇ ದಿನಗಳಲ್ಲಿ ಶಾಲಾ ಕಾಲೇಜುಗಳ ಆರಂಭವಾಗಲಿದ್ದು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ತುರ್ತಾಗಿ ನಗರಸಭೆ ಅಧಿಕಾರಿಗಳು ಜಾಲಿ ಗಿಡಗಳನ್ನು ಕತ್ತರಿಸಬೇಕು ಎಂದು ಒತ್ತಾಯಿಸುತ್ತಾರೆ ಪ್ರಶಾಂತ್ ನಗರದ ನಿವಾಸಿ ಮಹೇಶಪ್ಪ.</p>.<p>ಕೊಳ್ಳೇಗಾಲಕ್ಕೆ ತೆರಳಲು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಕುಲುಮೆ ರಸ್ತೆಯಲ್ಲಿ ಶಾಲಾ ಕಾಲೇಜು, ಜಿಲ್ಲಾ ಬಿಜೆಪಿ ಕಚೇರಿ, ನಗರದ ಅತಿದೊಡ್ಡ ಹೂವಿನ ಮಾರುಕಟ್ಟೆ ಇದೆ. ಸೇವಾಭಾರತಿ ಶಾಲೆಗೆ ಹೋಗುವ ಮಕ್ಕಳು ಇದೇ ರಸ್ತೆಯಲ್ಲಿ ಸಾಗುತ್ತಾರೆ, ಚೆನ್ನಾಪುರದ ಮೊಳೆಯಲ್ಲಿರುವ ಹೂವಿನ ಮಾರುಕಟ್ಟೆಗೆ ಹೋಗುವ ಬೆಳೆಗಾರರು, ವ್ಯಾಪಾರಿಗಳು ಇದೇ ರಸ್ತೆ ಬಳಸುತ್ತಾರೆ.</p>.<p>ಬೆಳಿಗ್ಗೆ ಹಾಗೂ ಸಂಜೆ ಸುತ್ತಮುತ್ತಲಿನ ಬಡಾವಣೆಯ ನೂರಾರು ಸಾರ್ವಜನಿಕರು ವಾಯುವಿಹಾರ ಮಾಡುತ್ತಾರೆ, ಸ್ವಲ್ಪ ಎಚ್ಚರ ತಪ್ಪಿದರೂ ಮುಳ್ಳು ಮುಖಕ್ಕೆ ಬಡಿಯುವ ಆತಂಕ ಇದೆ ಎನ್ನುತ್ತಾರೆ ಸ್ಥಳೀಯರಾದ ವಿಶ್ವನಾಥ್. ಕುಲುಮೆ ರಸ್ತೆ ನಗರಸಭೆಯ ಸಂಪೂರ್ಣ ನಿರ್ಲಕ್ಷ್ಯಕ್ಕೆ ತುತ್ತಾಗಿದೆ, ರಸ್ತೆ ಮಧ್ಯೆಯೇ ಮೂರ್ನಾಲ್ಕು ಮ್ಯಾನ್ಹೋಲ್ ಗುಂಡಿಗಳ ಮುಚ್ಚಳಗಳು ಇಲ್ಲವಾಗಿದ್ದು ಅಪಘಾತಗಳಿಗೆ ಆಹ್ವಾನ ನೀಡುತ್ತಿವೆ. ರಸ್ತೆಯ ತುಂಬೆಲ್ಲ ಗುಂಡಿಗಳು ಬಿದ್ದಿವೆ, ಪರ್ಲಾಂಗಿಗೆ ಒಂದರಂತೆ 1 ಕಿ.ಮೀ ಉದ್ದದ ರಸ್ತೆಯಲ್ಲಿ 15ಕ್ಕೂ ಹೆಚ್ಚು ಹಂಪ್ಸ್ಗಳಿವೆ.</p>.<p>ನಗರದ ಬಹುತೇಕ ಬಡಾವಣೆಗಳಲ್ಲಿರುವ ಖಾಲಿ ನಿವೇಶನಗಳು ಜಾಲಿ ಮುಳ್ಳಿನ ಪೊದೆಗಳು ಬೆಳೆದಿದ್ದು ವಿಷಜಂತುಗಳ ಆವಾಸಸ್ಥಾನವಾಗಿದೆ. ನಿವೇಶನ ಖರೀದಿ ಮಾಡಿರುವ ಮಾಲೀಕರು ನಿರ್ವಹಣೆ ಮಾಡದೆ ಅಕ್ಕಪಕ್ಕದ ಮನೆಗಳಿಗೆ ತೊಂದರೆಯಾಗಿದೆ. ಖಾಲಿ ನಿವೇಶನಗಳ ಬಹಳಷ್ಟು ಮಾಲೀಕರು ದೂರದ ಮೈಸೂರು, ಬೆಂಗಳೂರು ಸೇರಿದಂತೆ ಬೇರೆಡೆಗಳಲ್ಲಿ ನೆಲೆಸಿರುವುದು ಸಮಸ್ಯೆಗೆ ಕಾರಣವಾಗಿದೆ ಎನ್ನುತ್ತಾರೆ ನಗರಸಭೆಯ ಅಧಿಕಾರಿಗಳು.</p>.<p><strong>‘ಕಸ ವಿಲೇವಾರಿ ತಾಣ’</strong></p><p>ಕುಲುಮೆ ರಸ್ತೆಯ ಆಸುಪಾಸಿನ ಬಡಾವಣೆಗಳಲ್ಲಿ ಪ್ರತಿನಿತ್ಯ ಕಸ ಸಂಗ್ರಹ ಮಾಡದ ಪರಿಣಾಮ ಬಡಾವಣೆಗಳ ನಾಗರಿಕರು ರಸ್ತೆಯ ಇಕ್ಕೆಲಗಳಲ್ಲಿ ಕಸ ತಂದು ಸುರಿದಿದ್ದು ರಸ್ತೆಯೇ ಕಸ ವಿಲೇವಾರಿ ತಾಣವಾಗಿ ಬದಲಾಗಿವೆ. ರಸ್ತೆಯಲ್ಲಿ ಸಾಗುತ್ತಿದ್ದಾಗ ಕೊಳೆತ ಹಸಿ ತ್ಯಾಜ್ಯದ ದುರ್ವಾಸನೆ ಮೂಗಿಗೆ ಬಡಿದು ಅಸಹನೀಯ ಎನಿಸುತ್ತದೆ. ಅರ್ಧ ಕಿ.ಮೀ ರಸ್ತೆಯಲ್ಲಿ ಐದಾರು ಕಡೆ ಕಸ ಸುರಿಯುವ ಬ್ಲಾಕ್ ಸ್ಪಾಟ್ಗಳನ್ನು ಕಾಣಬಹುದು. </p>.<div><blockquote>ಕುಲುಮೆ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಜಾಲಿ ಮುಳ್ಳಿನ ಗಿಡಗಳನ್ನು ಕಡಿದು ಹಾಕಿಸಿ ಕಸದ ರಾಶಿಯನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲು ಸಿಬ್ಬಂದಿಗೆ ನಿರ್ದೇಶನ ನೀಡಲಾಗುವುದು. </blockquote><span class="attribution">–ಪರಶುರಾಮ ಛಲವಾದಿ, ನಗರಸಭೆ ಪೌರಾಯುಕ್ತ</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260520-37-308953477</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ:</strong> ನಗರದ ಖಾಲಿ ನಿವೇಶನಗಳಲ್ಲಿ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಹುಲುಸಾಗಿ ಬೆಳೆದಿರುವ ಜಾಲಿ ಗಿಡಗಳು (ಮುಳ್ಳಿನ ಗಿಡ) ಪಾದಚಾರಿಗಳ ಹಾಗೂ ವಾಹನ ಸವಾರರ ಪಾಲಿಗೆ ಕಂಟಕವಾಗಿ ಪರಿಣಮಿಸಿವೆ.</p>.<p>ನಡೆದಾಡುವಾಗ, ವಾಹನಗಳಲ್ಲಿ ಸಂಚರಿಸುವಾಗ ರಸ್ತೆಯ ಬದಿ ಹಾಗೂ ತಿರುವುಗಳಲ್ಲಿ ಏಕಾಏಕಿ ಎದುರಾಗುತ್ತಿರುವ ಜಾಲಿ ಮುಳ್ಳು ಚುಚ್ಚಿಸಿಕೊಂಡು ನಾಗರಿಕರು ಗಾಯಗೊಳ್ಳುತ್ತಿದ್ದಾರೆ. ಇಷ್ಟಾದರೂ ರಸ್ತೆಗೆ ಹಬ್ಬಿರುವ ಜಾಲಿ ಮುಳ್ಳನ್ನು ಕಡಿದು ಹಾಕಲು ನಗರಸಭೆಯಾಗಲಿ, ನಿವೇಶನಗಳ ಮಾಲೀಕರಾಗಲಿ ಮುಂದಾಗದಿರುವುದು ಸಾರ್ವನಿಕರ ಅಸಮಾಧಾನಕ್ಕೆ ಕಾರಣವಾಗಿದೆ.</p>.<p>ಬಿ.ರಾಚಯ್ಯ ಜೋಡಿ ರಸ್ತೆಯಿಂದ ರಾಮಸಮುದ್ರ ಬಡಾವಣೆಗೆ ಸಂಪರ್ಕ ಕಲ್ಪಿಸುವ ಕುಲುಮೆ ರಸ್ತೆಯ ಇಕ್ಕೆಲಗಳಲ್ಲಿ ಜಾಲಿ ಮುಳ್ಳಿನ ಗಿಡಗಳು ಬೆಳೆದಿದ್ದು ರಸ್ತೆಯ ಕಾಲು ಭಾಗ ಜಾಗವನ್ನು ಆವರಿಸಿಕೊಂಡಿದೆ. ಈ ರಸ್ತೆಯಲ್ಲಿ ಸಾಗುವಾಗ ನಾಗರಿಕರು ಸ್ವಲ್ಪ ಎಚ್ಚರ ತಪ್ಪಿದರೂ ಕಣ್ಣುಗಳಿಗೆ ಸಂಚಕಾರ ಖಚಿತ.</p>.<p>ಜಿಲ್ಲಾ ಬಿಜೆಪಿ ಕಚೇರಿಯಿಂದ ಚೆನ್ನಾಪುರದ ಮೋಳೆಯವರೆಗೂ ಚಾಚಿಕೊಂಡಿರುವ ರಸ್ತೆಯ ಹಲವು ಕಡೆಗಳಲ್ಲಿ ಮುಳ್ಳಿನ ಗಿಡಗಳು ರಸ್ತೆಗೆ ಬಾಗಿದ್ದು ಸಂಚರಿಸುವುದು ದುಸ್ತರವಾಗಿದೆ. ಹಲವು ಬಾರಿ ವಾಹನ ಸವಾರರ ಮುಖಕ್ಕೆ ಮುಳ್ಳುಗಳು ಬಡಿದು ಗಂಭೀರವಾದ ಗಾಯಗಳಾಗಿವೆ. ಸೈಕಲ್ ಚಲಾಯಿಸುವಾಗ ಮಕ್ಕಳ ಮುಖಕ್ಕೂ ಮುಳ್ಳುಗಳು ಬಡಿದು ಅನಾಹುತಗಳಾಗಿವೆ. ರಾತ್ರಿಯ ಹೊತ್ತು ಬೀದಿದೀಪಗಳು ಇಲ್ಲದ ಕಡೆಗಳಲ್ಲಿ ಬೈಕ್ ಸವಾರರ ಮುಖಕ್ಕೆ ಮುಳ್ಳು ಬಡಿದು ಅಪಘಾತಕ್ಕೆ ತುತ್ತಾಗಿದ್ದಾರೆ. ಮೈಕೈ ತರಚಿಕೊಂಡು ಗಾಯಗೊಂಡಿದ್ದಾರೆ. ರಸ್ತೆ ಬದಿ ಹಾಗೂ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಜಾಲಿ ಗಿಡಗಳು ದೈತ್ಯ ಮರಗಳಾಗಿ ರಸ್ತೆಗೆ ಚಾಚಿಕೊಂಡಿದ್ದು ಕತ್ತರಿಸುವ ಗೋಜಿಗೆ ಯಾರೂ ಮುಂದಾಗಿಲ್ಲ.</p>.<p>ಕೆಲವೇ ದಿನಗಳಲ್ಲಿ ಶಾಲಾ ಕಾಲೇಜುಗಳ ಆರಂಭವಾಗಲಿದ್ದು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ತುರ್ತಾಗಿ ನಗರಸಭೆ ಅಧಿಕಾರಿಗಳು ಜಾಲಿ ಗಿಡಗಳನ್ನು ಕತ್ತರಿಸಬೇಕು ಎಂದು ಒತ್ತಾಯಿಸುತ್ತಾರೆ ಪ್ರಶಾಂತ್ ನಗರದ ನಿವಾಸಿ ಮಹೇಶಪ್ಪ.</p>.<p>ಕೊಳ್ಳೇಗಾಲಕ್ಕೆ ತೆರಳಲು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಕುಲುಮೆ ರಸ್ತೆಯಲ್ಲಿ ಶಾಲಾ ಕಾಲೇಜು, ಜಿಲ್ಲಾ ಬಿಜೆಪಿ ಕಚೇರಿ, ನಗರದ ಅತಿದೊಡ್ಡ ಹೂವಿನ ಮಾರುಕಟ್ಟೆ ಇದೆ. ಸೇವಾಭಾರತಿ ಶಾಲೆಗೆ ಹೋಗುವ ಮಕ್ಕಳು ಇದೇ ರಸ್ತೆಯಲ್ಲಿ ಸಾಗುತ್ತಾರೆ, ಚೆನ್ನಾಪುರದ ಮೊಳೆಯಲ್ಲಿರುವ ಹೂವಿನ ಮಾರುಕಟ್ಟೆಗೆ ಹೋಗುವ ಬೆಳೆಗಾರರು, ವ್ಯಾಪಾರಿಗಳು ಇದೇ ರಸ್ತೆ ಬಳಸುತ್ತಾರೆ.</p>.<p>ಬೆಳಿಗ್ಗೆ ಹಾಗೂ ಸಂಜೆ ಸುತ್ತಮುತ್ತಲಿನ ಬಡಾವಣೆಯ ನೂರಾರು ಸಾರ್ವಜನಿಕರು ವಾಯುವಿಹಾರ ಮಾಡುತ್ತಾರೆ, ಸ್ವಲ್ಪ ಎಚ್ಚರ ತಪ್ಪಿದರೂ ಮುಳ್ಳು ಮುಖಕ್ಕೆ ಬಡಿಯುವ ಆತಂಕ ಇದೆ ಎನ್ನುತ್ತಾರೆ ಸ್ಥಳೀಯರಾದ ವಿಶ್ವನಾಥ್. ಕುಲುಮೆ ರಸ್ತೆ ನಗರಸಭೆಯ ಸಂಪೂರ್ಣ ನಿರ್ಲಕ್ಷ್ಯಕ್ಕೆ ತುತ್ತಾಗಿದೆ, ರಸ್ತೆ ಮಧ್ಯೆಯೇ ಮೂರ್ನಾಲ್ಕು ಮ್ಯಾನ್ಹೋಲ್ ಗುಂಡಿಗಳ ಮುಚ್ಚಳಗಳು ಇಲ್ಲವಾಗಿದ್ದು ಅಪಘಾತಗಳಿಗೆ ಆಹ್ವಾನ ನೀಡುತ್ತಿವೆ. ರಸ್ತೆಯ ತುಂಬೆಲ್ಲ ಗುಂಡಿಗಳು ಬಿದ್ದಿವೆ, ಪರ್ಲಾಂಗಿಗೆ ಒಂದರಂತೆ 1 ಕಿ.ಮೀ ಉದ್ದದ ರಸ್ತೆಯಲ್ಲಿ 15ಕ್ಕೂ ಹೆಚ್ಚು ಹಂಪ್ಸ್ಗಳಿವೆ.</p>.<p>ನಗರದ ಬಹುತೇಕ ಬಡಾವಣೆಗಳಲ್ಲಿರುವ ಖಾಲಿ ನಿವೇಶನಗಳು ಜಾಲಿ ಮುಳ್ಳಿನ ಪೊದೆಗಳು ಬೆಳೆದಿದ್ದು ವಿಷಜಂತುಗಳ ಆವಾಸಸ್ಥಾನವಾಗಿದೆ. ನಿವೇಶನ ಖರೀದಿ ಮಾಡಿರುವ ಮಾಲೀಕರು ನಿರ್ವಹಣೆ ಮಾಡದೆ ಅಕ್ಕಪಕ್ಕದ ಮನೆಗಳಿಗೆ ತೊಂದರೆಯಾಗಿದೆ. ಖಾಲಿ ನಿವೇಶನಗಳ ಬಹಳಷ್ಟು ಮಾಲೀಕರು ದೂರದ ಮೈಸೂರು, ಬೆಂಗಳೂರು ಸೇರಿದಂತೆ ಬೇರೆಡೆಗಳಲ್ಲಿ ನೆಲೆಸಿರುವುದು ಸಮಸ್ಯೆಗೆ ಕಾರಣವಾಗಿದೆ ಎನ್ನುತ್ತಾರೆ ನಗರಸಭೆಯ ಅಧಿಕಾರಿಗಳು.</p>.<p><strong>‘ಕಸ ವಿಲೇವಾರಿ ತಾಣ’</strong></p><p>ಕುಲುಮೆ ರಸ್ತೆಯ ಆಸುಪಾಸಿನ ಬಡಾವಣೆಗಳಲ್ಲಿ ಪ್ರತಿನಿತ್ಯ ಕಸ ಸಂಗ್ರಹ ಮಾಡದ ಪರಿಣಾಮ ಬಡಾವಣೆಗಳ ನಾಗರಿಕರು ರಸ್ತೆಯ ಇಕ್ಕೆಲಗಳಲ್ಲಿ ಕಸ ತಂದು ಸುರಿದಿದ್ದು ರಸ್ತೆಯೇ ಕಸ ವಿಲೇವಾರಿ ತಾಣವಾಗಿ ಬದಲಾಗಿವೆ. ರಸ್ತೆಯಲ್ಲಿ ಸಾಗುತ್ತಿದ್ದಾಗ ಕೊಳೆತ ಹಸಿ ತ್ಯಾಜ್ಯದ ದುರ್ವಾಸನೆ ಮೂಗಿಗೆ ಬಡಿದು ಅಸಹನೀಯ ಎನಿಸುತ್ತದೆ. ಅರ್ಧ ಕಿ.ಮೀ ರಸ್ತೆಯಲ್ಲಿ ಐದಾರು ಕಡೆ ಕಸ ಸುರಿಯುವ ಬ್ಲಾಕ್ ಸ್ಪಾಟ್ಗಳನ್ನು ಕಾಣಬಹುದು. </p>.<div><blockquote>ಕುಲುಮೆ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಜಾಲಿ ಮುಳ್ಳಿನ ಗಿಡಗಳನ್ನು ಕಡಿದು ಹಾಕಿಸಿ ಕಸದ ರಾಶಿಯನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲು ಸಿಬ್ಬಂದಿಗೆ ನಿರ್ದೇಶನ ನೀಡಲಾಗುವುದು. </blockquote><span class="attribution">–ಪರಶುರಾಮ ಛಲವಾದಿ, ನಗರಸಭೆ ಪೌರಾಯುಕ್ತ</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260520-37-308953477</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>