<p>ಚಾಮರಾಜನಗರ: ರಾಷ್ಟ್ರೀಯ ಅರಿಶಿನ ಮಂಡಳಿ ಸದಸ್ಯ ವಿಷ್ಣುವರ್ಧನ ದೇವಲ ನಾಯ್ಕ್ ನಗರದ ಎಪಿಎಂಸಿಯಲ್ಲಿರುವ ಅರಿಸಿನ ಮಾರುಕಟ್ಟೆಗೆ ಭೇಟಿ ನೀಡಿದರು.</p>.<p>ಮಾರುಕಟ್ಟೆಗೆ ಪೂರೈಕೆಯಾಗುವ ಅರಿಸಿನದ ಪ್ರಮಾಣ, ಜಿಲ್ಲೆಯಲ್ಲಿ ಬೆಳೆ ವಿಸ್ತೀರ್ಣ, ಬೆಲೆ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧಿಕಾರಿಗಳು ಹಾಗೂ ಬೆಳೆಗಾರರಿಂದ ಮಾಹಿತಿ ಪಡೆದರು.</p>.<p>ಅವರು ಮಾತನಾಡಿ ಶೀಘ್ರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ರೈತ ಉತ್ಪಾದಕ ಸಂಸ್ಥೆಗಳು, ರೈತ ಸಂಘಟನೆಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಅರಿಶಿನ ಬೆಳೆಯುವ ರೈತರ ಸಭೆ ನಡೆಸಲಾಗುವುದು. ಅರಿಸಿನ ಮಂಡಳಿಯಿಂದ ದೊರೆಯುವ ಸೌಲಭ್ಯಗಳನ್ನು ಬೆಳೆಗಾರರಿಗೆ ತಲುಪಿಸಲು ಒತ್ತು ನೀಡಲಾಗುವುದು ಎಂದರು.</p>.<p>ಅರಿಶಿನ ಬೆಳೆಯುವ ರೈತರಿಗೆ ಅಗತ್ಯವಾಗಿ ಬೇಕಾದ ಬಾಯ್ಲರ್, ಡ್ರೈಯರ್, ಟಾರ್ಪಾಲಿನ್, ಸಂಸ್ಕರಣ ಘಟಕಗಳಿಗೆ ಹಣಕಾಸು ನೆರವಿನ ಜೊತೆಗೆ ತಾಂತ್ರಿಕ ನೆರವು ನೀಡಲಾಗುವುದು ಎಂದು ವಿಷ್ಣುವರ್ಧನ ಭರವಸೆ ನೀಡಿದರು.</p>.<p>ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಉತ್ಕೃಷ್ಠ ಗುಣಮಟ್ಟದ ಅರಿಶಿನವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಜಿಲ್ಲೆಯ ಅರಿಶಿನದಲ್ಲಿ ಕರ್ಕುಮಿನ್ ಪ್ರಮಾಣ ಶೇ 4ಕ್ಕಿಂತ ಹೆಚ್ಚಾಗಿದ್ದು ಔಷಧೀಯ ಗುಣಗಳ ಕಾರಣಕ್ಕೆ ಬೇಡಿಕೆ ಹೆಚ್ಚಿದೆ ಎಂದರು.</p>.<p>ಜಿಲ್ಲೆಯಲ್ಲಿ 8,500 ಹೆಕ್ಟೇರ್ ಪ್ರದೇಶದಲ್ಲಿ ಅರಿಶಿನ ಬೆಳೆಯಲಾಗುತ್ತಿದ್ದು ಮೌಲ್ಯವರ್ಧನೆಯ ಮೂಲಕ ಬೆಳೆಗಾರರು ಹೆಚ್ಚಿನ ಲಾಭ ಪಡೆಯಲು ಅವಕಾಶ ಇದೆ. ಅರಿಶಿನ ಮಂಡಳಿಯಿಂದ ತರಬೇತಿ, ತಾಂತ್ರಿಕ ನೆರವು ದೊರೆತರೆ ರೈರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.</p>.<p>ರೈತರು ಮಾತನಾಡಿ, ಅರಿಶಿನ ಬೆಳೆಗೆ ಉತ್ತಮ ದರ ಸಿಗಬೇಕು, ಬೆಲೆ ಏರಿಳಿತದಿಂದ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅರಿಶಿನ ಬೆಳೆಗೆ ಸ್ಥಿರವಾದ ಬೆಲೆ ನಿಗದಿಮಾಡಬೇಕು ಎಂದು ಮನವಿ ಮಾಡಿದರು.</p>.<p>ಜಿಲ್ಲೆಯಲ್ಲಿ ಸುಸ್ಥಿರವಾಗಿ ನಿಲ್ಲುವ ಹೊಸ ಅರಿಶಿನ ತಳಿಗಳನ್ನು ಪರಿಚಯಿಸಬೇಕು. ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಅರಿಶಿನ ಬಿತ್ತನೆಗೆ ಅನುಕೂಲವಾಗುವ ತಳಿಗಳ ಸಂಶೋಧನೆ ಮಾಡಬೇಕು ಎಂದು ಸಲಹೆ ನೀಡಿದರು.</p>.<p>ಎಪಿಎಂಸಿ ಕಾರ್ಯದರ್ಶಿ ಜಗದೀಶ್, ಸಹಾಯಕ ಕಾರ್ಯದರ್ಶಿ ಮಧುಕುಮಾರ್ ಹಾಗೂ ರೈತರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260328-37-550017363</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಾಮರಾಜನಗರ: ರಾಷ್ಟ್ರೀಯ ಅರಿಶಿನ ಮಂಡಳಿ ಸದಸ್ಯ ವಿಷ್ಣುವರ್ಧನ ದೇವಲ ನಾಯ್ಕ್ ನಗರದ ಎಪಿಎಂಸಿಯಲ್ಲಿರುವ ಅರಿಸಿನ ಮಾರುಕಟ್ಟೆಗೆ ಭೇಟಿ ನೀಡಿದರು.</p>.<p>ಮಾರುಕಟ್ಟೆಗೆ ಪೂರೈಕೆಯಾಗುವ ಅರಿಸಿನದ ಪ್ರಮಾಣ, ಜಿಲ್ಲೆಯಲ್ಲಿ ಬೆಳೆ ವಿಸ್ತೀರ್ಣ, ಬೆಲೆ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧಿಕಾರಿಗಳು ಹಾಗೂ ಬೆಳೆಗಾರರಿಂದ ಮಾಹಿತಿ ಪಡೆದರು.</p>.<p>ಅವರು ಮಾತನಾಡಿ ಶೀಘ್ರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ರೈತ ಉತ್ಪಾದಕ ಸಂಸ್ಥೆಗಳು, ರೈತ ಸಂಘಟನೆಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಅರಿಶಿನ ಬೆಳೆಯುವ ರೈತರ ಸಭೆ ನಡೆಸಲಾಗುವುದು. ಅರಿಸಿನ ಮಂಡಳಿಯಿಂದ ದೊರೆಯುವ ಸೌಲಭ್ಯಗಳನ್ನು ಬೆಳೆಗಾರರಿಗೆ ತಲುಪಿಸಲು ಒತ್ತು ನೀಡಲಾಗುವುದು ಎಂದರು.</p>.<p>ಅರಿಶಿನ ಬೆಳೆಯುವ ರೈತರಿಗೆ ಅಗತ್ಯವಾಗಿ ಬೇಕಾದ ಬಾಯ್ಲರ್, ಡ್ರೈಯರ್, ಟಾರ್ಪಾಲಿನ್, ಸಂಸ್ಕರಣ ಘಟಕಗಳಿಗೆ ಹಣಕಾಸು ನೆರವಿನ ಜೊತೆಗೆ ತಾಂತ್ರಿಕ ನೆರವು ನೀಡಲಾಗುವುದು ಎಂದು ವಿಷ್ಣುವರ್ಧನ ಭರವಸೆ ನೀಡಿದರು.</p>.<p>ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಉತ್ಕೃಷ್ಠ ಗುಣಮಟ್ಟದ ಅರಿಶಿನವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಜಿಲ್ಲೆಯ ಅರಿಶಿನದಲ್ಲಿ ಕರ್ಕುಮಿನ್ ಪ್ರಮಾಣ ಶೇ 4ಕ್ಕಿಂತ ಹೆಚ್ಚಾಗಿದ್ದು ಔಷಧೀಯ ಗುಣಗಳ ಕಾರಣಕ್ಕೆ ಬೇಡಿಕೆ ಹೆಚ್ಚಿದೆ ಎಂದರು.</p>.<p>ಜಿಲ್ಲೆಯಲ್ಲಿ 8,500 ಹೆಕ್ಟೇರ್ ಪ್ರದೇಶದಲ್ಲಿ ಅರಿಶಿನ ಬೆಳೆಯಲಾಗುತ್ತಿದ್ದು ಮೌಲ್ಯವರ್ಧನೆಯ ಮೂಲಕ ಬೆಳೆಗಾರರು ಹೆಚ್ಚಿನ ಲಾಭ ಪಡೆಯಲು ಅವಕಾಶ ಇದೆ. ಅರಿಶಿನ ಮಂಡಳಿಯಿಂದ ತರಬೇತಿ, ತಾಂತ್ರಿಕ ನೆರವು ದೊರೆತರೆ ರೈರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.</p>.<p>ರೈತರು ಮಾತನಾಡಿ, ಅರಿಶಿನ ಬೆಳೆಗೆ ಉತ್ತಮ ದರ ಸಿಗಬೇಕು, ಬೆಲೆ ಏರಿಳಿತದಿಂದ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅರಿಶಿನ ಬೆಳೆಗೆ ಸ್ಥಿರವಾದ ಬೆಲೆ ನಿಗದಿಮಾಡಬೇಕು ಎಂದು ಮನವಿ ಮಾಡಿದರು.</p>.<p>ಜಿಲ್ಲೆಯಲ್ಲಿ ಸುಸ್ಥಿರವಾಗಿ ನಿಲ್ಲುವ ಹೊಸ ಅರಿಶಿನ ತಳಿಗಳನ್ನು ಪರಿಚಯಿಸಬೇಕು. ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಅರಿಶಿನ ಬಿತ್ತನೆಗೆ ಅನುಕೂಲವಾಗುವ ತಳಿಗಳ ಸಂಶೋಧನೆ ಮಾಡಬೇಕು ಎಂದು ಸಲಹೆ ನೀಡಿದರು.</p>.<p>ಎಪಿಎಂಸಿ ಕಾರ್ಯದರ್ಶಿ ಜಗದೀಶ್, ಸಹಾಯಕ ಕಾರ್ಯದರ್ಶಿ ಮಧುಕುಮಾರ್ ಹಾಗೂ ರೈತರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260328-37-550017363</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>