<p><strong>ಯಳಂದೂರು:</strong> ತಾಲ್ಲೂಕಿನ ಸುತ್ತಮುತ್ತ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಲೆ ಇದೆ. ಅತಿಯಾದ ಉಷ್ಣಾಂಶದಿಂದ ಕೆಲವು ಬೆಳೆಗಳು ಬಾಡುತ್ತಿದ್ದು, ಮಳೆರಾಯನ ಕೃಪೆಗಾಗಿ ಕಾದಿವೆ. ಆದರೆ ಸ್ಥಳೀಯ ಮಾವಿನ ಮರಗಳಲ್ಲಿ ಗುಣಮಟ್ಟದ ಕಾಯಿಗಳು ಅರಳಿವೆ. ಮಳೆ ಸುರಿದರೆ ಮಾವಿನ ಇಳುವರಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಲ್ಲಿ ಇದ್ದಾರೆ ಬೆಳೆಗಾರರು.</p>.<p>ಕಾಡಂಚಿನ ಪ್ರದೇಶ ಮತ್ತು ತೋಟಗಾರಿಕಾ ಹಿಡುವಳಿಗಳಲ್ಲಿ 250 ಹೆಕ್ಟರ್ ಪ್ರದೇಶದಲ್ಲಿ ಮಾವು ಬೆಳೆ ಆವರಿಸಿದೆ. ಬಾದಾಮಿ, ಇಮಾಂ ಫಸಂದ್, ದಶೇರಿ. ಮಲ್ಲಿಕಾ ಹಾಗೂ ರಸಪೂರಿ ಮತ್ತಿತರ ತಳಿಗಳನ್ನು ನಾಟಿ ಮಾಡಿದ್ದು, ಮುಂದಿನ ಹದಿನೈದು ದಿನಗಳಲ್ಲಿ ಗುಣಮಟ್ಟದ ಮಾವು ಕೊಯ್ಲಿಗೆ ಬರಲಿದೆ. ಯಾವುದೇ ರೋಗ-ರುಜಿನ ಇಲ್ಲದ ಸಾವಯವ ವಿಧಾನದಲ್ಲಿ ಅಭಿವೃದ್ಧಿಪಡಿಸಿದ ಮಾವು ವಿದೇಶಗಳಿಗೂ ರಫ್ತಾಗುವ ಭರವಸೆ ಮೂಡಿಸಿದೆ.</p>.<p>‘ಈ ಬಾರಿ ಉಷ್ಣಾಂಶದಲ್ಲಿ ಏರಿಕೆ ಆಗಿದೆ. ಬಿಸಿಲಿನ ಪ್ರಖರತೆ ಹತ್ತಾರು ಬೆಳೆಗಳನ್ನು ಬಾಧಿಸಿದೆ. ಆದರೆ, ಮಾವು ಬೆಳೆಗೆ ಯಾವುದೇ ಹಾನಿ ಉಂಟಾಗಿಲ್ಲ. ಬದಲಾಗಿ ಮಾವಿನ ಗುಣಮಟ್ಟ ಹಾಗೂ ತೂಕ ಎರಡು ಹೆಚ್ಚಾಗಿದೆ’ ಎನ್ನುತ್ತಾರೆ ಬೆಳೆಗಾರರು.</p>.<p>‘ಉತ್ತಮವಾಗಿ ನಿರ್ವಹಣೆ ಮಾಡಿದ ತೋಟಗಳಲ್ಲಿ ಮಾವು ಚೆನ್ನಾಗಿ ಬಂದಿದೆ. ಪಲಭರಿತ ಮರಗಳು ಈಚೆಗೆ ಸುರಿದ ಆಲಿಕಲ್ಲು ಮಳೆಗೂ ಸಿಲುಕಿಲ್ಲ. ಕೀಟಬಾಧೆಯೂ ಕಂಡುಬಂದಿಲ್ಲ. ಸಾವಯವ ವಿಧಾನದಲ್ಲಿ ಅಭಿವೃದ್ಧಿ ಪಡಿಸಿದ ತೋಟಗಳು ಉತ್ತಮ ಫಲ ಕಚ್ಚಿವೆ. ಸ್ಥಳೀಯ ಮಾರುಕಟ್ಟೆ ಹಾಗೂ ರಾಜಧಾನಿ ಸೇರಿದಂತೆ ಆನ್ಲೈನ್ ಮೂಲಕ ಪ್ರತಿವರ್ಷ ₹ 5 ಲಕ್ಷ ಮಾವು ವಹಿವಾಟು ನಡೆಸುತ್ತೇನೆ’ ಎನ್ನುತ್ತಾರೆ’ ಬೆಳೆಗಾರ ಕೆಸ್ತೂರು ಬಸವಣ್ಣ.</p>.<p>ಮಾವಿನ ಮರಗಳಿಗೆ ನೀರುಣಿಸಿ: ಮಾವಿನ ಮರಗಳಲ್ಲಿ ಈ ಬಾರಿ ಫಸಲು ನಿರೀಕ್ಷಿಸಿದಷ್ಟು ಬಂದಿಲ್ಲ. ಆದರೆ. ಕಾಯಿ ಕಚ್ಚಿರುವ ಫಲ ಬಿಸಿಲಿನ ತಾಪದ ನಡುವೆಯೂ ಚೆನ್ನಾಗಿ ಅರಳಿದೆ. ಮುಂದಿನ ದಿನಗಳಲ್ಲಿ ಮಳೆ ಕೊರತೆ ಎದುರಾದಲ್ಲಿ ಮರಗಳಿಗೆ ತೇವಾಂಶದ ಕೊರತೆ ಎದುರಾಗಲಿದೆ. ಇದರಿಂದ ಕಾಯಿ ತೂಕ ಮತ್ತು ಬಣ್ಣ ಕಳೆದುಕೊಳ್ಳಬಹುದು. ಕೃಷಿಕರಿಗೂ ಉತ್ತಮ ಬೆಲೆ ಸಿಗದು. ಹಾಗಾಗಿ, ಮರಗಳಿಗೆ ತಕ್ಷಣ ನೀರು ಉಣಿಸಬೇಕು. ಕಾಯಿಗಳಿಗೆ ಯಾವುದೇ ರಸಾಯನಿಕ ಬಳಸದೆ, ನೈಸರ್ಗಿಕವಾಗಿ ಹಣ್ಣು ಮಾಗಿಸಬೇಕು. ಇದರಿಂದ ಗುಣಮಟ್ಟದ ಹಣ್ಣಿಗೆ ಬೇಡಿಕೆ ಬರಲಿದೆ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್.ರಾಜು ರೈತರಿಗೆ ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು:</strong> ತಾಲ್ಲೂಕಿನ ಸುತ್ತಮುತ್ತ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಲೆ ಇದೆ. ಅತಿಯಾದ ಉಷ್ಣಾಂಶದಿಂದ ಕೆಲವು ಬೆಳೆಗಳು ಬಾಡುತ್ತಿದ್ದು, ಮಳೆರಾಯನ ಕೃಪೆಗಾಗಿ ಕಾದಿವೆ. ಆದರೆ ಸ್ಥಳೀಯ ಮಾವಿನ ಮರಗಳಲ್ಲಿ ಗುಣಮಟ್ಟದ ಕಾಯಿಗಳು ಅರಳಿವೆ. ಮಳೆ ಸುರಿದರೆ ಮಾವಿನ ಇಳುವರಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಲ್ಲಿ ಇದ್ದಾರೆ ಬೆಳೆಗಾರರು.</p>.<p>ಕಾಡಂಚಿನ ಪ್ರದೇಶ ಮತ್ತು ತೋಟಗಾರಿಕಾ ಹಿಡುವಳಿಗಳಲ್ಲಿ 250 ಹೆಕ್ಟರ್ ಪ್ರದೇಶದಲ್ಲಿ ಮಾವು ಬೆಳೆ ಆವರಿಸಿದೆ. ಬಾದಾಮಿ, ಇಮಾಂ ಫಸಂದ್, ದಶೇರಿ. ಮಲ್ಲಿಕಾ ಹಾಗೂ ರಸಪೂರಿ ಮತ್ತಿತರ ತಳಿಗಳನ್ನು ನಾಟಿ ಮಾಡಿದ್ದು, ಮುಂದಿನ ಹದಿನೈದು ದಿನಗಳಲ್ಲಿ ಗುಣಮಟ್ಟದ ಮಾವು ಕೊಯ್ಲಿಗೆ ಬರಲಿದೆ. ಯಾವುದೇ ರೋಗ-ರುಜಿನ ಇಲ್ಲದ ಸಾವಯವ ವಿಧಾನದಲ್ಲಿ ಅಭಿವೃದ್ಧಿಪಡಿಸಿದ ಮಾವು ವಿದೇಶಗಳಿಗೂ ರಫ್ತಾಗುವ ಭರವಸೆ ಮೂಡಿಸಿದೆ.</p>.<p>‘ಈ ಬಾರಿ ಉಷ್ಣಾಂಶದಲ್ಲಿ ಏರಿಕೆ ಆಗಿದೆ. ಬಿಸಿಲಿನ ಪ್ರಖರತೆ ಹತ್ತಾರು ಬೆಳೆಗಳನ್ನು ಬಾಧಿಸಿದೆ. ಆದರೆ, ಮಾವು ಬೆಳೆಗೆ ಯಾವುದೇ ಹಾನಿ ಉಂಟಾಗಿಲ್ಲ. ಬದಲಾಗಿ ಮಾವಿನ ಗುಣಮಟ್ಟ ಹಾಗೂ ತೂಕ ಎರಡು ಹೆಚ್ಚಾಗಿದೆ’ ಎನ್ನುತ್ತಾರೆ ಬೆಳೆಗಾರರು.</p>.<p>‘ಉತ್ತಮವಾಗಿ ನಿರ್ವಹಣೆ ಮಾಡಿದ ತೋಟಗಳಲ್ಲಿ ಮಾವು ಚೆನ್ನಾಗಿ ಬಂದಿದೆ. ಪಲಭರಿತ ಮರಗಳು ಈಚೆಗೆ ಸುರಿದ ಆಲಿಕಲ್ಲು ಮಳೆಗೂ ಸಿಲುಕಿಲ್ಲ. ಕೀಟಬಾಧೆಯೂ ಕಂಡುಬಂದಿಲ್ಲ. ಸಾವಯವ ವಿಧಾನದಲ್ಲಿ ಅಭಿವೃದ್ಧಿ ಪಡಿಸಿದ ತೋಟಗಳು ಉತ್ತಮ ಫಲ ಕಚ್ಚಿವೆ. ಸ್ಥಳೀಯ ಮಾರುಕಟ್ಟೆ ಹಾಗೂ ರಾಜಧಾನಿ ಸೇರಿದಂತೆ ಆನ್ಲೈನ್ ಮೂಲಕ ಪ್ರತಿವರ್ಷ ₹ 5 ಲಕ್ಷ ಮಾವು ವಹಿವಾಟು ನಡೆಸುತ್ತೇನೆ’ ಎನ್ನುತ್ತಾರೆ’ ಬೆಳೆಗಾರ ಕೆಸ್ತೂರು ಬಸವಣ್ಣ.</p>.<p>ಮಾವಿನ ಮರಗಳಿಗೆ ನೀರುಣಿಸಿ: ಮಾವಿನ ಮರಗಳಲ್ಲಿ ಈ ಬಾರಿ ಫಸಲು ನಿರೀಕ್ಷಿಸಿದಷ್ಟು ಬಂದಿಲ್ಲ. ಆದರೆ. ಕಾಯಿ ಕಚ್ಚಿರುವ ಫಲ ಬಿಸಿಲಿನ ತಾಪದ ನಡುವೆಯೂ ಚೆನ್ನಾಗಿ ಅರಳಿದೆ. ಮುಂದಿನ ದಿನಗಳಲ್ಲಿ ಮಳೆ ಕೊರತೆ ಎದುರಾದಲ್ಲಿ ಮರಗಳಿಗೆ ತೇವಾಂಶದ ಕೊರತೆ ಎದುರಾಗಲಿದೆ. ಇದರಿಂದ ಕಾಯಿ ತೂಕ ಮತ್ತು ಬಣ್ಣ ಕಳೆದುಕೊಳ್ಳಬಹುದು. ಕೃಷಿಕರಿಗೂ ಉತ್ತಮ ಬೆಲೆ ಸಿಗದು. ಹಾಗಾಗಿ, ಮರಗಳಿಗೆ ತಕ್ಷಣ ನೀರು ಉಣಿಸಬೇಕು. ಕಾಯಿಗಳಿಗೆ ಯಾವುದೇ ರಸಾಯನಿಕ ಬಳಸದೆ, ನೈಸರ್ಗಿಕವಾಗಿ ಹಣ್ಣು ಮಾಗಿಸಬೇಕು. ಇದರಿಂದ ಗುಣಮಟ್ಟದ ಹಣ್ಣಿಗೆ ಬೇಡಿಕೆ ಬರಲಿದೆ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್.ರಾಜು ರೈತರಿಗೆ ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>