‘ಕಂದಹಳ್ಳಿ, ಬೂದಂಬಳ್ಳಿ, ಚಂಗಚಹಳ್ಳಿ ಗ್ರಾಮಸ್ಥರು ನಸುಕಿ ನಿಂದಲೇ ಊರ ಮಧ್ಯದ ದೇವರ ಅಖಾಡದಲ್ಲಿ ರಕ್ತ ಬೀಜಾಸುರನ ಕಾಳಗಕ್ಕೆ ವೇದಿಕೆ ಸಜ್ಜುಗೊಳಿಸಿದ್ದರು. ಮಧ್ಯಾಹ್ನ ಗ್ರಾಮಸ್ಥರು ನಾಲ್ಕು ಮೂಲೆಗಳಲ್ಲಿ ಬಿದಿರು ತಟ್ಟೆ ನೆಟ್ಟ ಸ್ಥಳಕ್ಕೆ ಸತ್ತಿಗೆ, ಸೂರಿಪಾನಿ ಹೊತ್ತು ಸಾಗಿದರು. ಹೆಬ್ಬರಕ್ಕೆ ಪುಷ್ಪ, ಸುಗಂಧಗಳನ್ನು ಇಟ್ಟು, ಶಬ್ದ ಮಾಡುತ್ತಾ ಮೆರವಣಿಗೆಯಲ್ಲಿ ಪ್ರವೇಶಿಸಿದರು. ಕಿಕ್ಕಿರಿದು ತುಂಬಿದ ಜನಸ್ತೋಮದ ಜಯ ಘೋಷಗಳ ನಡುವೆ ಚಾಮುಂಡೇಶ್ವರಿ ದುಷ್ಟ ಶಕ್ತಿಯನ್ನು ಸಂಹಾರ ನಡೆಸುವ ಭಕ್ತರ ವೈಭವವನ್ನು ಸಾವಿರಾರು ಜನರು ಕಣ್ತುಂಬಿಕೊಂಡರು.