ಬೇರೆ ಸಾಂಪ್ರದಾಯಿಕ ಉತ್ಪನ್ನಗಳನ್ನು ಹೇಗೋ ಕೆಲ ದಿನ ದಾಸ್ತಾನು ಮಾಡಬಹುದು. ಆದರೆ, ತೋಟಗಾರಿಕಾ ಬೆಳೆಗಳನ್ನು ಕಟಾವು ಮಾಡಿ ಮಾರಾಟ ಮಾಡದೆ ಬೇರೆ ದಾರಿಯೇ ಇಲ್ಲ. ಈಗ ಕಲ್ಲಂಗಡಿಯನ್ನು ಕೊಳ್ಳುವವರೇ ಇಲ್ಲದೆ, ರೈತರು ಜಮೀನಿನಲ್ಲಿ ಹಾಗೆ ಬಿಡುತ್ತಿದ್ದಾರೆ. ಇನ್ನೂ ಕೆಲವರು ಉಚಿತವಾಗಿ ಹಂಚುತ್ತಿದ್ದಾರೆ. ಜಾನುವಾರುಗಳಿಗೆ ಮೇಯಲು ಬಿಡುತ್ತಿದ್ದಾರೆ.