ಹಿಂದಿನ ವರ್ಷ ವ್ಯಾಪಾರ ವಹಿವಾಟು ಚೆನ್ನಾಗಿ ನಡೆಯುತ್ತಿದ್ದ ಕಾರಣದಿಂದ ತಾಲ್ಲೂಕಿನ ಎಲ್ಲಾ ಪಂಚಾಯತಿಗಳಲ್ಲಿ ತೆರಿಗೆ ವಸೂಲಿ ಚೆನ್ನಾಗಿತ್ತು. ಅದರಲ್ಲಿ ಸಿಬ್ಬಂದಿ ಸಂಬಳ, ಕಚೇರಿ ನಿರ್ವಹಣೆ, ಪಂಚಾಯತಿ ವ್ಯಾಪ್ತಿಯ ಯೋಜನೆಗಳಿಗೆ ಅನುದಾನ, ವಿದ್ಯುತ್ ಬಿಲ್ ಕಟ್ಟಲು ಸೇರಿದಂತೆ ಇತರ ವೆಚ್ಚಗಳಿಗೆ ತೊಂದರೆ ಇರಲಿಲ್ಲ. ಮೂರ್ನಾಲ್ಕು ತಿಂಗಳುಗಳಿಂದ ಅಂಗಡಿಗಳ ಮಾಲೀಕರು ಮಾಲೀಕರು, ‘ವ್ಯಾಪಾರ ಇಲ್ಲ, ಮುಂದೆ ಕಟ್ಟುತ್ತೇವೆ’ ಎಂದು ಹೇಳುತ್ತಿದ್ದಾರೆ ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಯೊಬ್ಬರು (ಪಿಡಿಒ) ‘ಪ್ರಜಾವಾಣಿ’ಗೆ ತಿಳಿಸಿದರು.