ಮೆಕ್ಯಾನಿಕ್ ಆಗಿರುವ ನನಗೆ ಹೇಗೆ ಸೋಂಕು ತಗುಲಿತು ಎಂಬುದೇ ಗೊತ್ತಿಲ್ಲ. ನಾನು ಹೊರ ರಾಜ್ಯಗಳಿಗೆ, ಬೇರೆ ಜಿಲ್ಲೆಗಳಿಗೂ ಪ್ರಯಾಣ ಮಾಡಿರಲಿಲ್ಲ. ಜ್ವರ ಬಂದ ಕಾರಣಕ್ಕೆ ಆಸ್ಪತ್ರೆಗೆ ಹೋದಾಗ ಗಂಟಲು ದ್ರವ ಸಂಗ್ರಹಿಸಿದರು. ಮೂರು ದಿನಗಳ ನಂತರ ಸೋಂಕು ತಗುಲಿದೆ ಎಂದು ಮಾಹಿತಿ ಬಂತು. ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಚಾಮರಾಜನಗರದಲ್ಲಿರುವ ಕೋವಿಡ್ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನ ಕೋವಿಡ್ ಕೇರ್ ಕೇಂದ್ರದಲ್ಲಿ ಇರಿಸಿದ್ದರು.