ಹಿರಿಯ ರಂಗಕರ್ಮಿ ಕೆ.ವೆಂಕಟರಾಜು ಅವರು ಮಾತನಾಡಿ, ‘ಸಾಹಿತ್ಯ ಚಟುವಟಿಕೆ ಮಾಡಲು ಜಿಲ್ಲಾಧಿಕಾರಿ ಅವರು ಆಸಕ್ತಿ ವಹಿಸಿ ಜಾಗವನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ. ಇದೇ ಉತ್ಸಾಹದಿಂದ ಪರಿಷತ್ತಿನ ನಿವೇಶನದಲ್ಲಿ ಕಟ್ಟಡ ಕೂಡ ನಿರ್ಮಾಣ ಮಾಡಬೇಕು ಮತ್ತು ಜಿಲ್ಲಾಧಿಕಾರಿ ರವಿಯವರಂತಹ ಅಧಿಕಾರಿ ಇದ್ದರೆ ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮಾಡಲು ಸಾಧ್ಯ’ ಎಂದು ಹೇಳಿದ ಅವರು, ಪರಿಷತ್ತಿಗೆ ಗಣಕಯಂತ್ರವನ್ನು ಕೊಡಿಸಬೇಕು ಎಂದು ಮನವಿ ಮಾಡಿಕೊಂಡರು.